ಕಾಸರಗೋಡು: ನಾಳೆ ಎಡರಂಗ ಪರ ಚುನಾವಣಾ ಪ್ರಚಾರ
Update: 2016-05-10 18:53 GMT
ಕಾಸರಗೋಡು, ಮೇ 10: ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯರಾದ ಪ್ರಕಾಶ್ ಕಾರಟ್ ಮತ್ತು ಪಿಣರಾಯಿ ವಿಜಯನ್ ಮೇ 12ರಂದು ಜಿಲ್ಲೆಗಾಗಮಿಸುವರು.
ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಎಡರಂಗ ಪರ ಚುನಾವಣಾ ಪ್ರಚಾರ ಸಮಾವೇಶವನ್ನುದ್ದೇಶಿಸಿ ಮಾತನಾಡುವರು.
ಪ್ರಕಾಶ್ ಕಾರಟ್ ಬೆಳಗ್ಗೆ 10 ಗಂಟೆಗೆ ಮುಳ್ಳೇರಿಯ, 11 ಗಂಟೆಗೆ ಅಡೂರು, 5 ಗಂಟೆಗೆ ಚೆರ್ವತ್ತೂರು, 5:30ಕ್ಕೆ ನೀಲೇಶ್ವರ ಮತ್ತು 6 ಗಂಟೆಗೆ ತ್ರಿಕ್ಕರಿಪುರದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡುವರು.
ಪಿಣರಾಯಿ ವಿಜಯನ್ 10 ಗಂಟೆಗೆ ಬೋವಿಕ್ಕಾನ, 3 ಗಂಟೆಗೆ ಕಾಸರಗೋಡು, 4:30ಕ್ಕೆ ಚಾಲಕಡವು, 5:30ಕ್ಕೆ ನೀಲೇಶ್ವರದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡುವರು.