ನಾಳೆ ಅಲಿಕುಟ್ಟಿ ಸ್ತಾದ್ರಿಗೆ ಅಭಿನಂದನೆ
ಉಳ್ಳಾಲ, ಮೇ 11: ದೇರಳಕಟ್ಟೆ ರೇಂಜ್ ಮದ್ರಸದ ಮ್ಯಾನೇಜ್ಮೆಂಟ್, ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್, ಸಮಸ್ತದ ಎಲ್ಲ ಅಂಗಸಂಸ್ಥೆಗಳ ಸಂಯಕ್ತ ಅಶ್ರಯದಲ್ಲಿ ಸಮಸ್ತ ನೂತನ ಪ್ರಧಾನ ಕಾರ್ಯದರ್ಶಿ ಜಾಮಿಯಾ ಕೆ. ಅಲಿಕುಟ್ಟಿ ಉಸ್ತಾದ್ರಿಗೆ ಅಭಿನಂದನೆ ಹಾಗೂ ಕೋಯಕುಟ್ಟಿ ಉಸ್ತಾದ್ ಮತ್ತು ಚೆರುಶ್ಶೇರಿ ಉಸ್ತಾದ್ರ ಅನುಸ್ಮರಣಾ ಕಾರ್ಯಕ್ರಮ ಮೇ 13ರಂದು ದೇರಳಕಟ್ಟೆ ಸಿಟಿಗ್ರೌಂಡಿನಲ್ಲಿ ನಡೆಯಲಿದೆ. ಅಲಿ ತಂಙಳ್ ಕುಂಬೋಳ್ ದುಆ ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದು, ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಸೈಯದ್ ಝೈನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ ದಿಕ್ಸೂಚಿ ಭಾಷಣ ಮಾಡಲಿದ್ದು, ನ್ಯಾಯವಾದಿ ಹನೀಫ್ ಹುದವಿ ಹಾಗೂ ಮಜೀದ್ ಬಾಖವಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಮ್ಯಾನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.