ಬಂಟ್ವಾಳ ತಾಲೂಕು ಜಮಾಅತ್ ಮಟ್ಟದ ಸಮಾಜ ಸೇವಕರ ಸ್ನೇಹ ಸಮ್ಮಿಲನ

Update: 2016-05-11 18:43 GMT

ಮಂಗಳೂರು, ಮೇ 11, ಬಂಟ್ವಾಳ ತಾಲೂಕಿನ ಎಲ್ಲ ಮಸೀದಿಗೊಳಪಟ್ಟ ಜಮಾಅತ್‌ಗಳಲ್ಲಿ ಸೇವೆಗೈಯುತ್ತಿರುವ ಸಮಾಜ ಸೇವಕರ ಸ್ನೇಹ ಸಮ್ಮಿಲನವು ಮೇ 13ರಂದು ಸಂಜೆ 4ಕ್ಕೆ ಬಿ.ಸಿ.ರೋಡ್‌ನ ರಿಕ್ಷಾ ಭವನದಲ್ಲಿ ನಡೆಯಲಿದೆ. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೇತನ, ಸರಕಾರದ ಸವಲತ್ತುಗಳು, ಮಾದರಿ ಜಮಾಅತ್ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ 0824-4267883, 9972283365 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News