ಉಳ್ಳಾಲ ಕೊಲೆ ಯತ್ನ ಪ್ರಕರಣ: ಐವರ ಬಂಧನ

Update: 2016-05-12 13:04 GMT

ಮಂಗಳೂರು, ಮೇ 12: ಉಳ್ಳಾಲದಲ್ಲಿ ಇತ್ತೀಚೆಗೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉಳ್ಳಾಲ ಮೊಗವೀರಪಟ್ಣ ನಿವಾಸಿಗಳಾದ ಶಿವನ್ (22), ರಮಿತ್ (23), ಸವನ್ (23), ಶ್ರವಣ್ (22), ತುಷಾರ್ (22) ಎಂದು ಗುರುತಿಸಲಾಗಿದೆ.

ಎ.14ರಂದು ಬೆಳಗ್ಗೆ ಸುಮಾರು 4:20ಕ್ಕೆ ಬಂದರ್‌ನ ಮೀನು ದಕ್ಕೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಲತೀಫ್ ಮತ್ತು ಸಲೀಂ ಎಂಬವರನ್ನು ಕೋಡಿ ರಸ್ತೆಯ ಬಳಿಯಲ್ಲಿ ಲತೀಫ್‌ರ ಬೈಕ್ ತಡೆದು ನಿಲ್ಲಿಸಿ ಹಲ್ಲೆಗೆ ಯತ್ನಿಸಿದ್ದರು.

ಅಲ್ಲದೆ, ಎಪ್ರಿಲ್ 25ರಂದು ಬೆಳಗ್ಗೆ ಸುಮಾರು 4:45ಕ್ಕೆ ಇಬ್ರಾಹೀಂ ಸಫ್ವಾನ್ ಎಂಬವರು ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಬೈಕ್‌ನ್ನು ಅಡ್ಡಗಟ್ಟಿ ತಲವಾರನಿಂದ ಕಡಿದು ಕೊಲೆಗೆ ಯತ್ನಿಸಿದ್ದರು. ಈ ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಸುರತ್ಕಲ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News