ಬಾಲಕಿಯ ಅಪಹರಣ ಪ್ರಕರಣ: ಮೂವರ ಬಂಧನ

Update: 2016-05-12 17:10 GMT

ಮಂಗಳೂರು, ಮೇ 12: ಬಾಲಕಿಯೋರ್ವಳನ್ನು ಪುಸಲಾಯಿಸಿ ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಗಳೂರಿನ ನಿವಾಸಿಗಳಾದ ಶಫೀರ್, ಶಾಕಿರ್ ಮತ್ತು ಅಝ್ಹರ್ ಎಂದು ಗುರುತಿಸಲಾಗಿದೆ.

ಎಸೆಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಇದೇ ತಿಂಗಳ 9ರಂದು ಅಪಹರಿಸಿದ ಬಗ್ಗೆ ಮಹಿಳಾ ಠಾಣಾ ಇನ್‌ಸ್ಪೆಕ್ಟರ್ ಕಲಾವತಿ ಪ್ರಕರಣ ದಾಖಲಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News