ಐವರು ಮಾನಸಿಕ ಅಸ್ವಸ್ಥರ ರಕ್ಷಣೆ

Update: 2016-05-12 18:21 GMT

ಉಡುಪಿ, ಮೇ 12: ಬೈಂದೂರು ಮತ್ತು ಶಿರೂರು ಪರಿಸರದಲ್ಲಿ ತಿರುಗಾಡುತ್ತಿದ್ದ ಐವರು ಮಾನಸಿಕ ಅಸ್ವಸ್ಥರನ್ನು ಬುಧವಾರ ರಕ್ಷಿಸಿ ಆರೈಕೆಗಾಗಿ ಕಟಪಾಡಿ ಶಂಕರಪುರದ ‘ವಿಶ್ವಾಸ’ದ ಮನೆಗೆ ಸೇರಿಸಲಾಗಿದೆ.
 ಗಂಗೊಳ್ಳಿಯ ಮುಹಮ್ಮದ್ ಇಬ್ರಾಹೀಂ ಮಾಡಿದ ಕರೆಯಂತೆ ‘ವಿಶ್ವಾಸ’ದ ಮನೆಯ ತಂಡ ಬೈಂದೂರಿಗೆ ಆಗಮಿಸಿ ಬೈಂದೂರಿನ ಬಸ್ ನಿಲ್ದಾಣದಲ್ಲಿ 55-60 ವಯಸ್ಸಿನ ಮಹಿಳೆ ಹಾಗೂ ಸುಮಾರು 75-80 ವಯಸ್ಸಿನ ವೃದ್ಧೆ, ಶಿರೂರಿನಲ್ಲಿ ಸುಮಾರು 40 ವರ್ಷ ಪ್ರಾಯದ ಯುವಕ, ಶಿರೂರು ಮಾರುಕಟ್ಟೆ ಬಳಿ 70-75 ವರ್ಷ ವಯಸ್ಸಿನ ವೃದ್ಧ, ಕೊಲ್ಲೂರು ಕ್ರಾಸ್ ಬಳಿ ಸುಮಾರು 50 ವರ್ಷ ವಯಸ್ಸಿನ ವ್ಯಕ್ತಿಯನ್ನು ವಶಕ್ಕೆ ಪಡೆಯಿತು.
ಇವರೆಲ್ಲ ಹಲವು ಸಮಯಗಳಿಂದ ಈ ಪರಿಸರದಲ್ಲಿ ಮಾನಸಿಕ ಅಸ್ವಸ್ಥರಾಗಿ ರಸ್ತೆ ಬದಿ ತಿರುಗಾಡುತ್ತಿದ್ದರು. ಸಾರ್ವಜನಿಕರ ಸಹಾಯದೊಂದಿಗೆ ಈ ಐವರನ್ನು ‘ವಿಶ್ವಾಸ’ದ ಮನೆಗೆ ಕರೆದುಕೊಂಡು ಬಂದು ಶುಚಿಗೊಳಿಸಿ, ಹೊಸ ಬಟ್ಟೆಯನ್ನು ತೊಡಿಸಿ ವೈದ್ಯಕೀಯ ಚಿಕಿತ್ಸೆಯನ್ನು ಆರಂಭಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News