ಪುತ್ತೂರು: ರಿಕ್ಷಾಕ್ಕೆ ಲಾರಿ ಮತ್ತು ಬಸ್ ಢಿಕ್ಕಿ: ಚಾಲಕ ಪಾರು
Update: 2016-05-13 11:57 GMT
ಪುತ್ತೂರು, ಮೇ 13: ರಿಕ್ಷಾವೊಂದಕ್ಕೆ ಲಾರಿ ಮತ್ತು ಬಸ್ ಏಕಕಾಲದಲ್ಲಿ ಢಿಕ್ಕಿ ಹೊಡೆದು ರಿಕ್ಷಾ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಶುಕ್ರವಾರ ಮಧ್ಯಾಹ್ನ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ತಾಲೂಕಿನ ಕುಂಬ್ರ ಎಂಬಲ್ಲಿ ನಡೆದಿದೆ.
ಕುಂಬ್ರದ ರಿಕ್ಷಾ ಚಾಲಕ ಶಿಹಾಬುದ್ದೀನ್ ಎಂಬವರು ತನ್ನ ರಿಕ್ಷಾದಲ್ಲಿ ಕುಂಬ್ರಕ್ಕೆ ತೆರಳುವ ವೇಳೆಗೆ ಕುಂಬ್ರ ಸೇತುವೆಯ ಬಳಿ ಎದುರಿನಿಂದ ಬಂದ ಲಾರಿಯೊಂದು ಢಿಕ್ಕಿ ಹೊಡೆದಿದೆ. ಅಪಘಾತದ ವೇಗಕ್ಕೆ ಹಿಂದಕ್ಕೆ ಚಲಿಸಿದ ರಿಕ್ಷಾ ಹಿಂದಿನಿಂದ ಬರುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡೆದಿದೆ.
ಎದುರಿನಿಂದ ಲಾರಿ, ಹಿಂದಿನಿಂದ ಬಸ್ಸು ಏಕಕಾಲದಲ್ಲಿ ಢಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾ ಅಪ್ಪಚ್ಚಿಯಾಗಿದೆ. ಅಪಘಾತವಾಗುವ ವೇಳೆ ಚಾಲಕ ಶಿಹಾಬುದ್ದೀನ್ ರಿಕ್ಷಾದಿಂದ ಹಾರಿ ಬಚಾವಾಗಿದ್ದಾರೆ.
ಘಟನೆಯಿಂದ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.