ಮೇ 15ರಂದು ಮಜ್ಲಿಸುನ್ನೂರ್ ಹಾಗೂ ಕೋಯಕುಟ್ಟಿ ಉಸ್ತಾದ್ ಅನುಸ್ಮರಣೆ

Update: 2016-05-14 17:09 GMT

ಮಂಗಳೂರು, ಮೇ.14: ಸಂಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಿನ್ಯ ಇದರ ವತಿಯಿಂದ ಪ್ರತಿ ತಿಂಗಳು ನಡೆಯುವ ಮಜ್ಲಿಸುನ್ನೂರ್ ಹಾಗೂ ಕೋಯಕುಟ್ಟಿ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮ ಮೇ 15 ರಂದು ಸಂಜೆ 7 ಗಂಟೆಗೆ ಕಿನ್ಯ ಸಿ.ಎಚ್. ನಗರದಲ್ಲಿ ನಡೆಯಲಿದೆ.

ಅಬ್ದುಲ್ ಖಾದರ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸೈಯದ್ ಬಾತಿಷ್ ತಂಙಳ್ ಉದ್ಘಾಟಿಸಲಿದ್ದಾರೆ. ಸೈಯದ್ ಅಮೀರ್ ತಂಙಳ್ ದುಆಶೀರ್ವಚನ ನೀಡಲಿದ್ದಾರೆ. ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ , ಕೆ.ಯಂ. ಖಾಸಿಂ ದಾರಿಮಿ, ಕೆ.ಪಿ. ಅಬ್ದುರ್ರಹ್ಮಾನ್ ದಾರಿಮಿ ತಬೂಖ್, ಪಿ.ಎ. ಖಾಸಿಂ ದಾರಿಮಿ ದಮಾಂ ಭಾಷಣ ಮಾಡಲಿದ್ದಾರೆ.

ಕೆ.ಎಚ್. ಹುಸೈನ್ ಕುಂಞಿ ಹಾಜಿ, ಅಬೂಸ್ವಾಲಿಹ್ ಹಾಜಿ, ಬಶೀರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮುಸ್ತಫ ಫೈಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News