ಉಪ್ಪಿನಂಗಡಿ: ಸಿಡಿಲು ಬಡಿದು ಮನೆಗೆ ಹಾನಿ

Update: 2016-05-15 11:17 GMT

ಉಪ್ಪಿನಂಗಡಿ, ಮೇ 15: ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿಯಾಗಿ ವಿದ್ಯುತ್ ಉಪಕರಣಗಳು ಸುಟ್ಟು ಹೋದ ಘಟನೆ ಉಪ್ಪಿನಂಗಡಿಯ ಲಕ್ಷ್ಮೀನಗರದಲ್ಲಿ ರವಿವಾರ ನಸುಕಿನ ಜಾವ ಸಂಭವಿಸಿದೆ.

ನಸುಕಿನ ಜಾವ ಮೂರರ ಸುಮಾರಿಗೆ ಇಲ್ಲಿನ ಭವಾನಿ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಇದರಿಂದ ಮನೆಯ ಗೋಡೆಯಲ್ಲಿ ಗುಳಿ ತೋಡಿದಂತೆ ಬಿರುಕು ಬಿಟ್ಟಿದೆ. ಟಿವಿ ಪುಡಿಯಾಗಿದ್ದು, ಸ್ವಿಚ್‌ಬೋರ್ಡ್, ವಯರ್ ಸೇರಿದಂತೆ ಇನ್ನಿತರ ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ.

ಘಟನೆಯಿಂದ ಸುಮಾರು 25,000 ರೂ. ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಈ ಸಂದರ್ಭ ಮನೆಮಂದಿ ಮನೆಯಲ್ಲೇ ಮಲಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಉಪ್ಪಿನಂಗಡಿ ಗ್ರಾಮ ಕರಣಿಕ ರಮಾನಂದ ಚಕ್ಕಡಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲ್ ಹೆಗ್ಡೆ, ರಮೇಶ್ ಭಂಡಾರಿ ಭೇಟಿ ನೀಡಿದ್ದು, ಸರಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News