ಕಾಟಿಪಳ್ಳ: ಮಿಸ್ಬಾಹ್ ಮಹಿಳಾ ಕಾಲೇಜು ಉದ್ಘಾಟನೆ

Update: 2016-05-17 13:40 GMT

ಸುರತ್ಕಲ್, ಮೇ 16: ಕಾಟಿಪಳ್ಳದ ಮಿಸ್ಬಾಹ್ ನಾಲೆಡ್ಜ್ ಫೌಂಡೇಶನ್ ಅಧೀನದಲ್ಲಿ ಕೃಷ್ಣಾಪುರ ಕಾಟಿಪಳ್ಳದ ಮುಖ್ಯರಸ್ತೆಯ ಕರ್ಣಾಟಕ ಬ್ಯಾಂಕ್‌ನ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಿಸ್ಬಾ ಮಹಿಳಾ ಕಾಲೇಜು ಸೋಮವಾರ ಉದ್ಘಾ ಟನೆಗೊಂಡಿತು.

ಕಾಲೇಜಿನ ಕೆಳಅಂತಸ್ತನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಹೆತ್ತವರು ಮುಂದಾ ಗಬೇಕು. ಸ್ತ್ರೀ ದೌರ್ಜನ್ಯ, ಶೋಷಣೆ ನಿರ್ಮೂಲನೆಯಾಗಿ ಮುಕ್ತ ಸಮಾಜ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ದುವಾಶೀರ್ವಚನಗೈದು ಮಾತನಾಡಿದ ಅಖಿಲ ಭಾರತ ಮುಸ್ಲಿಮ್ ವಿದ್ವಾಂಸರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಇಸ್ಲಾಮ್ ಧರ್ಮ ಸೂಚಿಸಿರುವಂತೆ ಧಾರ್ಮಿಕ ನೆಲೆಗಟ್ಟಿನಲ್ಲಿ ಹೆಣ್ಣು ಮಕ್ಕಳಿಗೆ ಸರ್ವ ಸ್ವಾತಂತ್ರದ ಜೊತೆಗೆ ಉನ್ನತ ವಿದ್ಯಾಭ್ಯಾಸಗಳನ್ನು ನೀಡಲು ಸಮುದಾಯ ಮುಂದಾ ಗಬೇಕು ಎಂದು ಕರೆ ನೀಡಿದರು.

ಬಳಿಕ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, ಹೆಣ್ಣು ಮಕ್ಕಳು ಸುಶಿಕ್ಷಿತರಾಗುವ ಮೂಲಕ ಜೀವನದಲ್ಲಿ ಬರುವ ಸವಾಲುಗಳನ್ನು ಮೆಟ್ಟಿ ನಿಂತು ಜೀವನ ರೂಪಿಸಿಕೊಳ್ಳಬೇಕು ಎಂದರು.

ಕಾಲೇಜಿನ ಮೊದಲ ಅಂತಸ್ತನ್ನು ಯು.ಎ.ಇ. ದರ್ವೇಶ್ ಗ್ರೂಪ್‌ನ ಮಾಲಕ ಅಲ್ಹಾಜ್ ಹಸನ್ ಎಸ್. ದರ್ವೇಶ್ ಉದ್ಘಾಟಿಸಿ ಶುಭ ಹಾರೈಸಿದರು.

ಶಾಸಕ ಬಿ.ಎ.ಮೊಯ್ದಿನ್ ಬಾವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್, ಯುಎಇ ಉದ್ಯಮಿಗಳಾದ ಶೈಖ್ ಜಮಾಲ್ ಅಲ್ ಧರೀಫ್, ಶೈಖ್ ಒಸಾಮ ಮಹ್ಮೂದ್ ಅಲ್ ಮಹ್ಮೂದ್, ಕಾರ್ಕಳದ ತ್ವೈಬಾ ಎಜುಕೇಶನ್ ಗಾರ್ಡನ್ ಅಧ್ಯಕ್ಷ ಸೈಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್, ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಖಾಝಿ ಅಲ್ಹಾಜ್ ಇ.ಕೆ.ಇಬ್ರಾಹೀಂ ಮುಸ್ಲಿಯಾರ್, ಯೆನೆಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಲ್ಹಾಜ್ ವೈ.ಅಬ್ದುಲ್ಲಾ ಕುಂಞಿ, ಫಿಝಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಅಲ್ಹಾಜ್ ಬಿ.ಎಂ.ಫಾರೂಕ್, ದುಬೈ ಬ್ಯಾರೀಸ್ ಕಲ್ಚರಲ್ ಫೌಂಡೇಶನ್‌ನ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಕೆ.ಎಸ್.ಎ.ಮುಝೈನ್ ಗ್ರೂಪ್‌ನ ಮಾಲಕ ಝಕರಿಯಾ ಜೋಕಟ್ಟೆ, ದ.ಕ. ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್, ಕಾರ್ಪೊರೇಟರ್ ಬಶೀರ್ ಅಹ್ಮದ್, ನೂರುಲ್ ಹುದಾ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಪಿ.ಬದ್ರುದ್ದೀನ್ ಪಣಂಬೂರು, ಲಂಡನ್- ಅಮೆರಿಕನ್ ಸಿಟಿ ಕಾಲೇಜಿನ ಡೀನ್ ಕಾಪು ಮುಹಮ್ಮದ್, ಬದ್ರಿಯಾ ಜುಮಾ ಮಸೀದಿಯ ಮುಸ್ಲಿಮ್ ಜಮಾಅತ್‌ನ ಅಧ್ಯಕ್ಷ ಪಿ.ಎಂ.ಉಸ್ಮಾನ್, ಪಣಂಬೂರು ಮುಸ್ಲಿಮ್ ಜಮಾಅತ್‌ನ ಅಧ್ಯಕ್ಷ ಸಲೀಂ ರಫಿ, ಶೇಖ್ ಕರ್ನಿರೆ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಬಿ.ಎಚ್.ಖಾದರ್, ಶೇಕಬ್ಬ, ಕಾಲೇಜಿನ ಟ್ರಸ್ಟಿಗಳಾದ ಕೆ. ಮುಹಮ್ಮದ್ ಹಾರಿಸ್, ಬಿ.ಎ.ನಝೀರ್ ಕೃಷ್ಣಾಪುರ, ಎಚ್.ಐ.ಅಬೂಸುಫಿಯಾನ್ ಮದನಿ, ಶೈಖ್ ಮುಹಮ್ಮದ್ ಶರೀಫ್, ಅಬ್ದುಲ್ ಹಕೀಂ ಪಾಲ್ಕಾನ್, ಬಿ.ಫಕ್ರುದ್ದೀನ್ ಕಾಟಿಪಳ್ಳ, ಬಿ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಟಿ.ಎಚ್.ಮೆಹಬೂಬ್, ಇಸ್ಮಾಯೀಲ್ ಅಹ್ಮದ್ ಪಿ., ಮಹಮ್ಮದ್ ಮುಬೀನ್, ಎಚ್.ಎನ್.ಜಿ.ಸಿ.ಇಸ್ಮಾಯೀಲ್, ಬಿ.ಐ.ನಝೀರ್ ಹುಸೈನ್ ಕತರ್, ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

ಮಿಸ್ಬಾಹ್ ನಾಲೆಡ್ಜ್ ಫೌಂಡೇಶನ್‌ನ ಅಧ್ಯಕ್ಷ ಅಲ್ಹಾಜ್ ಬಿ.ಎಂ.ಮಮ್ತಾಝ್ ಅಲಿ ಸ್ವಾಗತಿಸಿದರು.

ಅಬ್ದುಲ್ ಸಮೀರ್ ಮತ್ತು ಸಂಗಡಿಗರು ಕಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಖಾಮಿಲ್ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. 

ಬಿ.ಎ.ನಝೀರ್ ವಂದಿಸಿದರು. ರಪೀಕ್ ಮಾಸ್ಟರ್, ಮಾಸ್ಟರ್ ಸ್ವರೂಪ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News