ಗುಂಪು ಘರ್ಷಣೆ: ಮತ್ತೆ ಇಬ್ಬರು ಆಸ್ಪತ್ರೆಗೆ ದಾಖಲು

Update: 2016-05-16 17:40 GMT

ಉಳ್ಳಾಲ, ಮೇ 16: ಉಳ್ಳಾಲ ದರ್ಗಾದ ಅಧ್ಯಕ್ಷರ ನೇಮಕ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ದರ್ಗಾ ಬಳಿ ಎರಡು ಬಣಗಳ ಜನರು ಜಮಾವಣೆಗೊಂಡು ನಡೆದ ಮಾತಿನ ಚಕಮಕಿ, ಘರ್ಷಣೆಯಲ್ಲಿ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಳ್ಳಾಲ ಟಿ.ಸಿ.ರೋಡ್ ಅಕ್ಕರಕೆರೆಯ ಯು.ಎಚ್.ಹುಸೈನ್(55) ಹಾಗೂ ಉಳ್ಳಾಲದ ಅಬ್ದುರ್ರಹ್ಮಾನ್ (50) ಎಂಬವರು ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News