ಮಂಜೇಶ್ವರ : ಬೊಳ್ನಾಡು ಗುತ್ತು ಮಲರಾಯ ದೈವಸ್ಥಾನದಿಂದ ಕಳವು

Update: 2016-05-17 10:44 GMT

 ಮಂಜೇಶ್ವರ : ಇಲ್ಲಿಗೆ ಸಮೀಪದ ಬೊಲ್ನಾಡು ಗುತ್ತು ಮಲರಾಯ ದೈವಸ್ಥಾನದಲ್ಲಿ ಕಳ್ಳತ್ತನ ನಡೆದ ಬಗ್ಗೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ದೈವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದೈವದ ಮೂರ್ತಿ , ಆಯುಧ , ಗಂಟೆ , ಗಂಟೆ ಮಣಿ , ಬೆಳ್ಳಿಯ ಚೆಂಬು ಗಳನ್ನು ಕಳವುಗೈದಿದ್ದಾರೆ. ಪ್ರಿತಿ ಮಂಗಳವಾರ ಇಲ್ಲಿ ಪೂಜೆಗಳು ನಡೆಯುತ್ತಿದ್ದು ಇದರಂತೆ ಮಂಗಳವಾರ ಬೆಳಿಗ್ಗೆ ಪೂಜಾರಿ ತನಿಯಪ್ಪ , ರಮಾನಂದ ಶೆಟ್ಟಿ ದೈವಸ್ಥಾನಕ್ಕೆ ಆಗಮಿಸಿದಾಗ ಬಾಗಿಲು ಮುರಿದು ಕಳ್ಳತನ ನಡೆಸಿರುವ ರೀತಿಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ನೀಡಲಾಗಿದ್ದು ಮಂಜೇಶ್ವರ ಠಾಣಾಧಿಕಾರಿ ಪ್ರಮೋದ್ ನೇತೃತ್ವದ ಪೋಲಿಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ವ್ಯಾಪಕವಾಗಿ ನಡೆಯುತ್ತಿದ್ದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮಂಜೇಶ್ವರ ಪೋಳಿಸರು ವಿಫಲರಾಗಿರುವುದೇ ಕಳ್ಳತನ ಹೆಚ್ಚಾಗಲು ಕಾರಣವೆಂದು ಇಲ್ಲಿನ ನಾಗರಿಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News