ದ.ಕ.: ಸಿಡಿಲು ಬಡಿದು ಮೂವರಿಗೆ ಗಾಯ

Update: 2016-05-17 17:35 GMT

ಮಂಗಳೂರು, ಮೇ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರದಂದು ಸಿಡಿಲು ಬಡಿದು ಮೂವರು ಗಾಯಗೊಂಡಿದ್ದಾರೆ.

 ಬೆಳ್ತಂಗಡಿಯ ವೇಣೂರುನಲ್ಲಿ ಗುಲಾಬಿ ಎಂಬವರಿಗೆ ಸಿಡಿಲು ಬಡಿದು ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾರಾವಿಯಲ್ಲಿ ಸಿಡಿಲು ಬಡಿದು ಇಬ್ಬರಿಗೆ ಗಾಯವಾಗಿದ್ದು ಅವರನ್ನು ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ತಾಲೂಕಿನ ಹಲವೆಡೆ ಗಾಳಿಮಳೆಗೆ ಮರಗಳು ರಸ್ತೆಗುರುಳಿ ಸಂಚಾರ ವ್ಯತ್ಯಾಯ ಉಂಟಾದ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾತ್ರಿ 9 ಗಂಟೆಗೆ ಸುಮಾರಿಗೆ ಸುರಿದ ಅಂದಾಜು ಮಳೆ ಮಂಗಳೂರು 7 ಮಿ.ಮೀ, ಬಂಟ್ವಾಳ 9 ಮಿ.ಮೀ, ಬೆಳ್ತಂಗಡಿ 9 ಮಿ.ಮೀ, ಸುಳ್ಯ 5 ಮಿ.ಮೀ, ಪುತ್ತೂರು 8 ಮಿ.ಮೀ, ಕಡಬ 5 ಮಿ.ಮೀ. ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News