ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ಅಂಗಸಂಸ್ಥೆಯಾಗಿರುವ ಕೊಟ್ಟಾರ-ಕೋಡಿಕಲ್ ಬಂಟರ ಸಂಘದ ಮಹಾಸಭೆ

Update: 2016-05-18 13:20 GMT

ಮಂಗಳೂರು,ಮೆ 18: ಬಂಟರ ಯಾನೆ ನಾಡವರ ಮಾತೃ ಸಂಘದ ಅಂಗಸಂಸ್ಥೆಯಾಗಿರುವ ಕೊಟ್ಟಾರ-ಕೋಡಿಕಲ್ ಬಂಟರ ಸಂಘದ ಮಹಾಸಭೆ ಮತ್ತು ಬಾರ್ಕೂರು ಮಹಾಸಂಸ್ಥಾನದ ಪೀಠಾಧೀಶ ಡಾ. ವಿಶ್ವಸಂತೋಷ ಭಾರತೀ ಶ್ರೀಗಳ ಧಾರ್ಮಿಕ ಪ್ರವಚನ ಮೇ 22ರಂದು ಸಂಜೆ 4 ಗಂಟೆಗೆ ಕೊಟ್ಟಾರ ಕೃಷ್ಣ ಜ್ಞಾನೋದಯ ಭಜನಾ ಮಂದಿರದಲ್ಲಿ ಜರಗಲಿದೆ ಎಂದು ಸಂಘದ ಸಲಹೆಗಾರ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
   ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕಾರ್ಯಕ್ರಮದ ಅಂಗವಾಗಿ ಸಂಜೆ 4 ಗಂಟೆಗೆ ಮಹಾಸಭೆಯ ನಡೆಯಲಿದ್ದು, ಸಂಜೆ 5ರಿಂದ ಧಾರ್ಮಿಕ ಪ್ರವಚನ ಜರಗಲಿದೆ. ಈ ಸಂದರ್ಭ ಕೊಟ್ಟಾರ ಕೋಡಿಕಲ್ ಬಂಟರ ಸಂಘದ ಸದಸ್ಯರು ಸಂಗ್ರಹಿಸಿದ ಹಳೆಯ ನಾಟ್ಯಗಳು, ನೋಟುಗಳು ಮತ್ತು ಪಾರಂಪರಿಕಾ ಗೃಹೋಪಯೋಗಿ ವಸ್ತುಗಳನ್ನು ಬಾರ್ಕೂರು ಸಂಸ್ಥಾನದ ವಸ್ತು ಸಂಗ್ರಹಾಲಯಕ್ಕೆ ನೀಡಲು ಸ್ವಾಮೀಜಿ ಅವರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ.ಕಮಲಾಕ್ಷ ಶೆಟ್ಟಿ , ಕಾರ್ಯದರ್ಶಿ ಅಶೋಕ ರೈ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ , ಕಾರ್ಯಕಾರಿ ಸದಸ್ಯ ಸುನೀಲ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News