ಕಾಸರಗೋಡು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಈವರೆಗಿನ ಪಕ್ಷವಾರು ಬಲಾಬಲ
ತಿರುವನಂತಪುರಂ, ಮೇ 19: ಕೇರಳದಲ್ಲಿ ಎಡ ಪಕ್ಷಗಳು ಅಧಿಕಾರದತ್ತ ದಾಪುಗಾಲಿಟ್ಟಿದೆ.ಕಾಸರಗೋಡು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಈವರೆಗಿನ ವಿವರ ಹೀಗಿದೆ. ಮಂಜೇಶ್ವರದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಪಿಬಿ ಅಬ್ದುರ್ರಝಾಕ್ ಸಮೀಪ ಸ್ಪರ್ಧಿ ಬಿಜೆಪಿಯ ಸುರೇಂದ್ರನ್ಗಿಂತ 3868 ವೋಟುಗಳಿಂದ ಮುಂದಿದ್ದಾರೆ. ಕಾಸರಗೋಡ್ನಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಎನ್ಎ ನೆಲ್ಲಿಕುನ್ನು ಸಮೀಪಸ್ಪರ್ಧಿ ಬಿಜೆಪಿಯ ರವೀಶ ತಂತ್ರಿಗಿಂತ 8607 ಮತಗಳಿಂದ ವಿಜೇತರಾಗಿದ್ದಾರೆ.
ಉದುಮದಲ್ಲಿ ಎಲ್ಡಿಎಫ್ ಅಭ್ಯರ್ಥಿ ಕೆ.ಕುಂಞರಾಮನ್ ನಿಕಟ ಸ್ಪರ್ಧಿ ಕಾಂಗ್ರೆಸ್ನ ಕೆ. ಸುಧಾಕರನ್ರಿಗಿಂತ 975 ವೋಟುಗಳಿಂದ ಮುಂದಿದ್ದಾರೆ. ಕಾಂಞಂಗಾಡ್ನಲ್ಲಿ ಎಲ್ಡಿಎಫ್ ಅಭ್ಯರ್ಥಿ ಇ. ಚಂದ್ರಶೇಖರನ್ ಸಮೀಪ ಸ್ಪರ್ಧಿ ಕಾಂಗ್ರೆಸ್ನ ಧನ್ಯಾಸುರೇಶ್ರಿಗಿಂತ 25,766 ಮತಗಳಿಂದ ಮುಂದಿದ್ದಾರೆ. ತೃಕ್ಕರಿಪುರದಲ್ಲಿ ಎಲ್ಡಿಎಫ್ನ ಎಂ.ರಾಜಗೋಪಾಲ್ ಸಮೀಪಸ್ಪರ್ಧಿ ಕಾಂಗ್ರೆಸ್ನ ಕೆ.ಪಿ. ಕುಂಞಿಕಣ್ಣನ್ರಿಗಿಂತ 20,573 ಮತಗಳಿಂದ ಮುಂದಿದ್ದಾರೆ.