ಯುನಿಟಿ ಆಸ್ಪತ್ರೆ: ತುಂಡಾದ ಮುಂಗೈಯ ಯಶಸ್ವಿ ಜೋಡಣೆ

Update: 2016-05-19 07:06 GMT

ಮಂಗಳೂರು, ಮೇ 19: ಗ್ರೈಂಡರ್‌ಗೆ ಸಿಲುಕಿ ತುಂಡಾಗಿದ್ದ ವ್ಯಕ್ತಿಯೊಬ್ಬರ ಮುಂಗೈಯನ್ನು ನಗರದ ಯುನಿಟಿ ಆಸ್ಪತ್ರೆಯ ವೈದ್ಯರ ತಂಡ ಶಸ್ತ್ರಕ್ರಿಯೆಯ ಮೂಲಕ ಯಶಸ್ವಿಯಾಗಿ ಜೋಡಿಸಿದೆ.

ಕೇರಳದ ನೀಲೇಶ್ವರದ ಉಷಾ ಎಂಬವರು ತೆಂಗಿನಕಾಯಿಯನ್ನು ಗ್ರೈಂಡರ್ ನಲ್ಲಿ ತುರಿಯುತ್ತಿದ್ದ ವೇಳೆ ಗ್ರೈಂಡರ್‌ಗೆ ಸಿಲುಕಿ ಮುಂಗೈ ಸಂಪೂರ್ಣ ತುಂಡಾಗಿ ಬೇರ್ಪಟ್ಟಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ನಡೆದ 6 ಗಂಟೆಯೊಳಗೆ ಮಹಿಳೆಗೆ ಚಿಕಿತ್ಸೆ ನೀಡಿದ ಯುನಿಟಿ ವೈದ್ಯರ ತಂಡ ಆಕೆಯ ಮುರಿದ ಮುಂಗೈಯನ್ನು ಯಶಸ್ವಿಯಾಗಿ ಜೋಡಿಸುವ ಶಸ್ತ್ರಚಿಕಿತ್ಸೆ ನಡೆಸಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಯುನಿಟಿ ಆಸ್ಪತ್ರೆಯ ವೈದ್ಯರಾದ ಡಾ.ಬಿ.ಸಚ್ಚಿದಾನಂದ ರೈ, ಅನಸ್ತೇಸಿಯಾ ವಿಭಾಗದ ಡಾ.ರಝಾಕ್‌ರನ್ನೊಳಗೊಂಡ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News