ಕರಿಯಂಗಳ: ಯುವಕನಿಗೆ ಹಲ್ಲೆ; ಜೀವ ಬೆದರಿಕೆ
Update: 2016-05-21 12:55 GMT
ಬಂಟ್ವಾಳ, ಮೇ 21: ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಇಲೆಕ್ಟ್ರಿಶನ್ ನಿತಿನ್ ಪೂಜಾರಿ ಎಂಬವರಿಗೆ ಸ್ಥಳೀಯ ನಿವಾಸಿಗಳಾದ ನವೀನ ಶೆಟ್ಟಿ ಮತ್ತು ಆತನ ಸಂಬಂಧಿಕ ಸುಕೇಶ ಶೆಟ್ಟಿ ಎಂಬವರು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಬಳಿಕ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಲ್ಲಿನ ಸಾಣೂರು ಪದವು ನಿವಾಸಿ ವಿಶ್ವನಾಥ ಪೂಜಾರಿ ಪುತ್ರನಾಗಿರುವ ನಿತಿನ್ ಪೂಜಾರಿ ಇಲೆಕ್ಟ್ರಿಶನ್ ವೃತ್ತಿ ನಡೆಸುತ್ತಿದ್ದು, ಶನಿವಾರ ಮಧ್ಯಾಹ್ನ ಇವರ ಪರಿಚಿತ ಪ್ರಸಾದ್ ಎಂಬವರ ಮೂಲಕ ಕರೆಸಿಕೊಂಡು ಬಳಿಕ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.