ವಿದ್ಯುತ್ ಆಘಾತ, ಲೈನ್ಮೆನ್ ಸಾವು
Update: 2016-05-21 18:32 GMT
ಬ್ರಹ್ಮಾವರ, ಮೇ 21: ಬ್ರಹ್ಮಾವರ ಪರಿಸರದಲ್ಲಿ ಕಳೆದ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡಾಗ, ಕಂಬ ಹತ್ತಿ ದುರಸ್ತಿ ನಡೆಸುತ್ತಿದ್ದ ಲೈನ್ಮೆನ್ಗೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಮೃತರನ್ನು ಬ್ರಹ್ಮಾವರ ಮೆಸ್ಕಾಂ ಶಾಖೆಯ ಲೈನ್ಮೆನ್ ಶಶಿಧರ ಸುವರ್ಣ (25) ಎಂದು ಗುರುತಿಸಲಾಗಿದೆ. ಸಾಸ್ತಾನದ ಕೋಡಿ ಕನ್ಯಾಣದವರಾದ ಅವರು ನಿನ್ನೆ ರಾತ್ರಿ ಚಾಂತಾರು ಗ್ರಾಮದ ಸುಂಕೇರಿ ಟ್ರೇಡರ್ಸ್ ಎದುರಿನ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದರು.
ಅದೇ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ, ಶಶಿಧರ ಅವರು ವಿದ್ಯುತ್ ತಂತಿಯನ್ನು ಹಿಡಿದು ನೇತಾಡತೊಡಗಿದರು. ಕೂಡಲೇ ಅವರನ್ನು ಕೆಳಗಿಳಿಸಿ ಚಿಕಿತ್ಸೆಗಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.