ವರ್ಕಾಡಿ ಚರ್ಚ್‌ನಲ್ಲಿ ಶಾಸಕ ಪಿ.ಬಿ.ಅಬ್ದುಲ್‌ರಝಾಕ್‌ಗೆ ಸಮ್ಮಾನ

Update: 2016-05-22 13:20 GMT

ಮಂಜೇಶ್ವರ: ಶಾಸಕರಾಗಿ ಮರು ಆಯ್ಕೆಗೊಂಡ ಪಿ.ಬಿ.ಅಬ್ದುಲ್‌ರಝಾಕ್‌ರವರನ್ನು ವರ್ಕಾಡಿ ಯೇಸು ಕ್ರಿಸ್ತರ ತಿರು ಹೃದಯದ ದೇವಾಲಯದ ಪಾಲನಾ ಸಮಿತಿ ವತಿಯಿಂದ ಅಭಿನಂದಿಸಿ ಸಮ್ಮಾನಿಸಲಾಯಿತು.

ರವಿವಾರ ಬೆಳಿಗ್ಗೆ ವರ್ಕಾಡಿ ಚರ್ಚ್ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಕಾಡಿ ಚರ್ಚ್ ಧರ್ಮಗುರುಗಳಾದ ರೆ.ಫಾ.ಫ್ರಾನ್ಸಿಸ್ ರೋಡ್ರಿಗಸ್ ಶಾಸಕರನ್ನು ಶಾಲು ಹೊದೆಸಿ. ಫಲಪುಷ್ಪ ,ಸ್ಮರಣಿಕೆ ನೀಡಿ ಸಮ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಅವರು ಕಳೆದ ಐದು ವರ್ಷಗಳ ಜನರ ಸೇವೆ ಮಾಡಿದ ಪ್ರತಿಫಲವಾಗಿ ಈ ಬಾರಿಯ ಚುನಾವಣೆಯಲ್ಲಿ ಶಾಸಕರು ಮತ್ತೆ ಗೆದ್ದು ಬಂದಿದ್ದಾರೆ, ಸರಳ ಸಜ್ಜನಿಕೆಯ, ಸರ್ವರನ್ನು ಸಮಭಾವದಿಂದ ಕಾಣುವ ಅವರ ಗುಣ ಮಹತ್ತರವಾದುದು, ಇನ್ನು ಐದು ವರ್ಷಗಳ ಕಾಲಾವಧಿಯಲ್ಲಿ ಅವರು ಜನಪ್ರೀತಿಗಳಿಸಲಿ ಎಂದು ಹಾರೈಸಿದರು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಜನರು ನನ್ನ ಮೇಲಿಟ್ಟ ವಿಶ್ವಾಸ, ಪ್ರೀತಿಗೆ ಚಿರಋಣಿಯಾಗಿದ್ದೇನೆ, ಇನ್ನು ಮುಂದೆಯೂ ಜನರ ಸೇವೆ ಮಾಡುವ ಭಾಗ್ಯ ದೊರೆತಿರುವುದು ನನ್ನ ಪಾಲಿಗೆ ಮಹಾ ಭಾಗ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೀಟಾ ಟೀಚರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ವರ್ಕಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಅಬ್ದುಲ್ ಮಜಿದ್ , ಪಂ.ಸದಸ್ಯೆ ರಹ್ಮತ್ ರಝಾಕ್, ಮಾಜೀ ಅಧ್ಯಕ್ಷ ಪಿ.ಬಿ.ಅಬೂಬಕ್ಕರ್, ಮಾಜೀ ಸದಸ್ಯ ಮೊಹಮ್ಮದ್ ಮಜಾಲ್, ದಿವಾಕರ್ ಎಸ್.ಜೆ., ಸಿಸ್ಟರ್ ಜೆರೋಸಾ, ಸಿಸ್ಟರ್ ಪ್ರಸಿಲ್ಲ, ಚರ್ಚ್ ಪಾಲನಾ ಕಾರ್ಯದರ್ಶಿ ಲವಿನಾ ಮೊಂತೇರೋ, ಯುಡಿಎಫ್ ಮುಖಂಡರಾದ ಡೇನಿಯಲ್ ಡಿ ಸೋಜಾ,ರೋನಿ ಡಿ.ಸೋಜಾ, ಹೆನ್ರಿ ಮೊಂತೇರೋ, ಇನಾಸ್ ಡಿ,ಸೋಜಾ, ಕಾಶ್ಮಿರ್ ಡಿ.ಸೋಜಾ, ಫ್ರಾನ್ಸಿಸ್ ಡಿ,ಸೋಜಾ ಕರುಮೊಗರು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಶಾಸಕರನ್ನು ಬ್ಯಾಂಡ್ ವಾದ್ಯಗಳ ಮೆರವಣಿಗೆಯಲ್ಲಿ ಚರ್ಚ್ ಪರಿಸರಕ್ಕೆ ಕರೆತರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News