ಕಾಸರಗೋಡು : ಚುನಾವಣೆ ಬಳಿಕ ಜಿಲ್ಲೆಯ ಕೆಲವಡೆ ಹಿಂಸಾತ್ಮಕ ಘಟನೆ

Update: 2016-05-23 07:15 GMT

 ಕಾಸರಗೋಡು, ಮೇ 23 : ಚುನಾವಣೆ ಬಳಿಕ  ಜಿಲ್ಲೆಯ ಕೆಲವಡೆ ಹಿಂಸಾತ್ಮಕ ಘಟನೆಗಳು ಮರುಕಳಿಸುತ್ತಿವೆ. ಮಧೂರು ವ್ಯಾಪ್ತಿಯಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ  ಅಟೋ ರಿಕ್ಷಾಗಳಿಗೆ ಬೆಂಕಿ ಹಚ್ಚಿದ ಘಟನೆ ಸೋಮವಾರ ಮುಂಜಾನೆ ನಡೆದಿವೆ.

ಉಳಿಯತ್ತಡ್ಕ ಮತ್ತು  ಚೆಟ್ಟ೦ಗುಯಿ ಯಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿವೆ. ಚುನಾವಣಾ ದಿನ ಬಿಜೆಪಿ ಮತಗಟ್ಟೆ  ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದ   ಚೆಟ್ಟ೦ಗುಯಿಯ ಸುಧಾಕರ ಮತ್ತು ಉಳಿಯತ್ತಡ್ಕ ದ  ಸುನಿಲ್ ಕುಮಾರ್ ರವರ ಅಟೋ ಗೆ  ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. 
ಎರಡೂ ಕೃತ್ಯದ ಹಿಂದೆ ಒಂದೇ ತಂಡ ಆಗಿರಬಹುದು ಎಂದು ಶಂಕಿಸಲಾಗಿದೆ  ಮುಂಜಾನೆ 1.30 ರಿಂದ 2.30 ರ ಮಧ್ಯೆ ಈ ಘಟನೆ ನಡೆದಿದೆ.
ವಿದ್ಯಾನಗರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News