ಸಚಿವ ರೈ ಪ್ರವಾಸ

Update: 2016-05-23 18:34 GMT

ಮಂಗಳೂರು, ಮೇ. 23: ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮೇ 24 ರಂದು ದ.ಕ. ಜಿಲ್ಲಾ ಪ್ರವಾಸದಲ್ಲಿರುವರು.
ಬೆಳಗ್ಗೆ 10:30ಕ್ಕೆ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸರಕಾರದ ಸಾಧನೆಯ ಪುಸ್ತಕ ಬಿಡುಗಡೆ, ಅಪರಾಹ್ನ 2:30ಕ್ಕೆ ಬೈಕಂಪಾಡಿಯ ಎಪಿಎಂಸಿ ಕಾರ್ಯಯೋಜನೆಯ ಬಗ್ಗೆ ಸಭೆ, 3:30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಂಪ್ವೆಲ್ನಲ್ಲಿ ಬಸ್ ನಿಲ್ದಾಣ ಹಾಗೂ ನೆಹರೂ  ಮೈದಾನದಲ್ಲಿ ನೆಹರೂ ಪ್ರತಿಮೆ ಸ್ಥಾಪನೆ ಬಗ್ಗೆ ಸಭೆ ಯಲ್ಲಿ ಭಾಗವಹಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News