ಕಾರ್ಕಳ: ರಸ್ತೆ ಅಪಘಾತಕ್ಕೆ ತಾಯಿ- ಮಗು ಬಲಿ

Update: 2016-06-26 18:37 GMT

ಾರ್ಕಳ, ಜೂ.26: ರಸ್ತೆ ಅಪಘಾತಕ್ಕೆ ತಾಯಿ-ಮಗು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಕಲ್ಯಾ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ರವಿವಾರ ಸಂಜೆ ನಡೆದಿದೆ.
ಬೆಳ್ಮಣ್ಣು ಸಮೀಪದ ಜಂತ್ರ ನಿವಾಸಿಗಳಾದ ಸೌಮ್ಯಾ(28) ಹಾಗೂ ಆಕೆಯ ಪುತ್ರ ಶ್ರಾವಂತ್(3) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸೌಮ್ಯಾರ ಪತಿ ಗಣೇಶ್ ಆಚಾರ್ಯ(38) ಗಂಭೀರ ಗಾಯಗೊಂಡಿದ್ದಾರೆ. ಎಣ್ಣೆಹೊಳೆಯಲ್ಲಿರುವ ಗಣೇಶ್‌ರ ತಂಗಿಯ ಮಗನ ನಾಮಕರಣ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಕೂಟರ್‌ಗೆ ಪಿಕಪ್ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಅತೀವೇಗವಾಗಿ ಬಂದ ಪಿಕಪ್ ಸ್ಕೂಟರ್‌ಗೆ ಬಲವಾಗಿ ಢಿಕ್ಕಿ ಹೊಡೆದ ಪರಿಣಾಮ ಸೌಮ್ಯಾ ಹಾಗೂ ಶ್ರಾವಂತ್ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆಗೆಸೆಯಲ್ಪಟ್ಟ ಗಣೇಶ್‌ರ ತಲೆ, ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆ ದಾಖಲಿಸಲಾಗಿದೆ. ಪಿಕಪ್‌ನ ಅತ್ಯಂತ ವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅದರ ಚಾಲಕ ಸಂತೋಷ್‌ನನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News