ಉಜಿರೆ: ಮರ ಬಿದ್ದು ಮನೆಗೆ ಹಾನಿ

Update: 2016-06-27 15:12 GMT

ಬೆಳ್ತಂಗಡಿ, ಜೂ.27: ಸೋಮವಾರ ಬೀಸಿದ ಭಾರೀ ಗಾಳಿ, ಮಳೆಗೆ ಉಜಿರೆ ಗ್ರಾಮದ ಬೆಳಾಲು ಕ್ರಾಸ್‌ನ ಉಮೇಶ್ ಆಚಾರ್ಯ ಎಂಬವರ ಮನೆಗೆ ಮರ ಬಿದ್ದು ಹಾನಿಗೊಂಡಿದೆ.

ಮನೆಯ ಬಹುತೇಕ ಹೆಂಚುಗಳು ಪುಡಿಯಾಗಿವೆ. ಮನೆಯಲ್ಲಿದ್ದವರಿಗೆ ಯಾವುದೇ ಹಾನಿ ಸಂಭವಿಸಿಲ್ಲ.

ಘಟನಾ ಸ್ಥಳಕ್ಕೆ ತಾಪಂ ಸದಸ್ಯ ಶಶಿಧರ ಕಲ್ಮಂಜ, ಸಮಾಜ ಸೇವಕ ಬಾಲಕೃಷ್ಣ ಶೆಟ್ಟಿ, ಜಿ. ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News