ಗಾಂಜಾ ಸೇವನೆ ಆರೋಪ: ಮೂವರ ಬಂಧನ

Update: 2016-06-28 18:03 GMT

ಮಂಗಳೂರು, ಜೂ.28: ನಗರದ ಬಂದರ್‌ನಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದಡಿಯಲ್ಲಿ ಮೂವರನ್ನು ಬಂದರು ಠಾಣಾ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

 ಬಂಧಿತರನ್ನು ಅಮ್ಮೆಮಾರ್‌ನ ದಿ.ಇಬ್ರಾಹಿಂ ಎಂಬವರ ಮಗ ಸಮೀರ್ (30), ಕಸ್ಬಾ ಬೆಂಗ್ರೆಯ ದಿ. ಹಸನಬ್ಬ ಅವರ ಪುತ್ರ ಹನೀಫ್ (32), ಪದವಿನಂಗಡಿಯ ರಾಮಚಂದ್ರ ಕರ್ಕೇರಾ ಪುತ್ರ ರಂಜಿತ್ (23) ಎಂದು ಗುರುತಿಸಲಾಗಿದೆ.

ಗಾಂಜಾ ಸೇವಿಸಿರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News