ಇಂದಿನಿಂದ ಶಾಲಾ ವಿದ್ಯಾರ್ಥಿಗಳ ಸಾಗಾಟ ಸೇವೆ ಸ್ಥಗಿತ

Update: 2016-07-01 18:37 GMT

ಉಪ್ಪಿನಂಗಡಿ, ಜು.1: ಶಾಲಾ ಮಕ್ಕಳ ವಾಹನಗಳಿಗೆ ಮಕ್ಕಳ ಸಂಖ್ಯೆಯ ವಿಚಾರದಲ್ಲಿ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ನಿಯಮಾವಳಿಯನ್ನು ರೂಪಿ ಸಿದೆ. ಈ ಸಂಬಂಧ ವಾಹನಚಾಲಕರು ಸಮಸ್ಯೆಗೆ ತುತ್ತಾಗುತ್ತಿರುವುದನ್ನು ಪ್ರತಿಭಟಿಸಿ ಜು.2ರಿಂದ ವಿದ್ಯಾರ್ಥಿ ಸಾಗಾಟ ಸೇವೆ ಸ್ಥಗಿತಗೊಳಿಲಾಗಿದೆ ಎಂದು ಉಪ್ಪಿನಂಗಡಿ ಶಾಲಾಮಕ್ಕಳ ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮೋಹನ ಪಕ್ಕಳ, ಉಪಾಧ್ಯಕ್ಷ ಹನೀಫ್ ಕುದ್ಲೂರು, ಕೋಶಾಧಿಕಾರಿ ಪ್ರವೀಣ್ ಫೆರ್ನಾಂಡೀಸ್, ಸದಸ್ಯರಾದ ಕುಶಾಲಪ್ಪ, ರಾಜಗೋಪಾಲ್, ಉಮೇಶ್, ಧರ್ಣಪ್ಪಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News