ಸುಳ್ಯ: ಯುವತಿಯ ಕತ್ತಿನಿಂದ ಸರ ಎರಗಿಸಿ ಕಳ್ಳ ಪರಾರಿ
Update: 2016-07-04 13:40 GMT
ಸುಳ್ಯ, ಜು.4: ದೇವಸ್ಥಾನಕ್ಕೆ ಹೋಗುತ್ತಿದ್ದ ಯುವತಿಯೊಬ್ಬಳ ಕತ್ತಿನಿಂದ ಚಿನ್ನದ ಸರವನ್ನು ಎರಗಿಸಿ ಪರಾರಿಯಾದ ಘಟನೆ ಅಂಬಟೆಡ್ಕದಲ್ಲಿ ಸೋಮವಾರ ನಡೆದಿದ್ದು, ಪೊಲೀಸರು ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ.
ಕಲ್ಲುಮುಟ್ಲು ದಿ.ಕರುಣಾಕರ ಎಂಬವರ ಪುತ್ರಿ ಆಶಾ ಶೆಟ್ಟಿ ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸುಳ್ಯ ಅಂಬಟೆಡ್ಕದಲ್ಲಿರುವ ಶ್ರೀ ವೆಂಕಟ್ರಮಣ ಮಂದಿರಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ನೀಲಿ ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದ ವ್ಯಕ್ತಿ ಆಶಾ ಶೆಟ್ಟಿಯವರು ದೇವಸ್ಥಾನದ ಮೆಟ್ಟಿಲು ಇಳಿಯುತ್ತಿದ್ದ ವೇಳೆ ಅವರ ಕತ್ತಿಗೆ ಕೈಹಾಕಿ 24 ಸಾವಿರ ರೂ. ವೌಲ್ಯದ 10 ಗ್ರಾಂ ತೂಕದ ಚಿನ್ನದ ಸರವನ್ನು ಎರಗಿಸಿ ಪರಾರಿಯಾಗಿದ್ದಾನೆ. ಘಟನೆ ಕುರಿತು ಸುಳ್ಯ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕಣ ದಾಖಲಾಗಿದೆ. ಆರೋಪಿ ಪತ್ತೆಗೆ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.