ಎರ್ಮಾಳು, ಮೂಳೂರಿನಲ್ಲಿ ಕಡಲ್ಕೊರೆತ ತೀವ್ರ

Update: 2016-07-04 18:47 GMT

ಪಡುಬಿದ್ರೆ, ಜು.4: ಕಳೆದ ಕೆಲವು ದಿನಗಳಿಂದ ಸುರಿದ ಮಳೆಗೆ ಎರ್ಮಾಳು ಹಾಗೂ ಮೂಳೂರಿನಲ್ಲಿ ಸೋಮವಾರ ಕಡಲ್ಕೊರೆತ ಕಾಣಿಸಿಕೊಂಡಿದೆ. ಕಡಲ್ಕೊರೆತದಿಂದ ಬಡಾ ಪಡು ನಿವಾಸಿಗಳಾದ ಕಲ್ಯಾಣಿ ಕರ್ಕೇರ ಮತ್ತು ಇಲ್ಯಾಸ್ ಎಂಬವರ ಮನೆಯ ಗೋಡೆಯವರೆಗೆ ಅಲೆಗಳು ಅಪ್ಪಳಿಸಿವೆ. ಕಡಲ್ಕೊರೆತ ತಡೆಗೆ ಹಾಕಲಾಗಿರುವ ಬೃಹತ್ ಗಾತ್ರದ ಕಲ್ಲುಗಳು ಸಮುದ್ರದ ಒಡಲು ಸೇರುತ್ತಿವೆೆ. ಸಮಾಜ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
 ಮಂಗಳೂರು, ಜು.4: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಾಯೋಜಿತ ಪ್ರಜ್ಞಾ ಸಾಂತ್ವಾನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಸಮಾಜ ಕಾರ್ಯಕರ್ತರ (ರಾತ್ರಿ ವೇಳೆಗೆ) ಹುದ್ದೆಗೆ ಪಿಯುಸಿ ವಿದ್ಯಾ ರ್ಹತೆವುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶ ಕರು, ಪ್ರಜ್ಞಾ ಸಲಹಾ ಕೇಂದ್ರ, ಕಂಕನಾಡಿ, ಮಂಗಳೂರು, ದೂ.ಸಂ.: 0824- 2432682 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News