ಮೂಡುಬಿದಿರೆ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ವನಮಹೋತ್ಸವ

Update: 2016-07-05 13:57 GMT

ಮೂಡುಬಿದಿರೆ, ಜು.5: ಕೋಟಿ ವೃಕ್ಷ ಅಭಿಯಾನದಂಗವಾಗಿ ಮೂಡುಬಿದಿರೆ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವನಮಹೋತ್ಸವದ ಮೂಲಕ ಮಂಗಳವಾರ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಯಿತು.

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಸುರೇಶ್ ಜೈನ್ ಗಿಡವನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆಯನ್ನು ನೀಡಿದರು.

ಮೂಡುಬಿದಿರೆ ಕೇಂದ್ರೀಯ ಉಪವಲಯಾರಣ್ಯಾಧಿಕಾರಿ ಅನಿಲ್ ಕೆ., ಹಿರಿಯ ಆರೋಗ್ಯ ಸಹಾಯಕಿ ರವಿಕಲಾ ಹಾಗೂ ಸಿಬ್ಬಂದಿ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯೆ, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು, ಅರಣ್ಯ ವೀಕ್ಷಕರಾದ ಸುಧಾಕರ ಮತ್ತು ನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News