ಸರ ಕಳವು ಆರೋಪಿಗಳನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು

Update: 2016-07-08 12:20 GMT

 ಕಾಸರಗೋಡು, ಜು.7: ಮಹಿಳೆಯಚಿನ್ನದ ಸರ ಎಗರಿಸಿ ಪರಾರಿಯಾಗಲೆ ಯತ್ನಿಸಿದ ಇಬ್ಬರು ಬೈಕ್ ಸವಾರರನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ತ್ರಿಕ್ಕರಿಪುರ ಸಮೀಪದ ಮಣಿಯಾಟ್ ಎಂಬಲ್ಲಿ ನಡೆದಿದೆ.

ಬಂಧಿತರನ್ನು ಚೆರ್ವತ್ತೂರು ವೆಂಗಾಡ್‌ನ ಕೆ.ವಿ.ಬೈಜು (30) ಮತ್ತು ಟಿ.ಸಿಜಿತ್(29) ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಟಿ.ವಿ.ರೋಹಿಣಿಯವರ 5 ಪವನ್ ಚಿನ್ನಾಭರಣ ವನ್ನು ಬೈಕ್‌ನಲ್ಲಿ ಬಂದ ಇಬ್ಬರು ಎಗರಿಸಿ ಪರಾರಿಯಾಗಿದ್ದರು. ರೋಹಿಣಿ ಬೊಬ್ಬೆ ಹಾಕಿದಾಗ ಧಾವಿಸಿ ಬಂದ ಸಾರ್ವಜನಿಕರು ಹುಡುಕಾಡಿದರೂ ಆರೋಪಿಗಳು ತಪ್ಪಿಸಿಕೊಂಡಿದ್ದರು.

 ಹಳದಿ ಮತ್ತು ಕಪ್ಪುವಸ್ತ್ರ ಧರಿಸಿದ ಇಬ್ಬರು ಈ ಕೃತ್ಯ ನಡೆಸಿರುವುದಾಗಿ ರೋಹಿಣಿ ತಿಳಿಸಿದ್ದು, ಅದರಂತೆ ವಾಹನಗಳಲ್ಲಿ ಬೆನ್ನತ್ತಿದ ನಾಗರಿಕರು ಶೋಧ ನಡೆಸಿದರು. ಬಿರಿಯಾಚ್ಚೇರಿ ಎಂಬಲ್ಲಿ ಆರೋಪಿಗಳನ್ನು ಗುರುತಿಸಿದ ಸಾರ್ವಜನಿಕರು ಮನೆಯೊಂದಕ್ಕೆ ನುಗ್ಗಿ ತಪ್ಪಿಸಲೆತ್ನಿಸಿದರೂ ಹಿಡಿಯುವಲ್ಲಿ ಯಶಸ್ವಿಯಾದರು.

ಮಹಿಳೆಯಿಂದ ಎಗರಿಸಿದ್ದ ಸರವನ್ನು ಆರೋಪಿಗಳಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಳಿಕ ಚಂದೇರ ಪೊಲೀಸರಿಗೆ ಒಪ್ಪಿಸಿದರು.

ಈ ಪರಿಸರದಲ್ಲಿ ನಡೆದ ಹಲವು ಚಿನ್ನಾಭರಣ ಎಗರಿಸಿದ ಪ್ರಕರಣಗಳಲ್ಲಿ ಇವರು ಶಾಮೀಲಾಗಿರಬೇಕು ಎಂದು ಶಂಕಿಸಲಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರುತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News