ಸಜಿಪನಡು ಗ್ರಾಪಂನಿಂದ ವನಮಹೋತ್ಸವ

Update: 2016-07-12 07:35 GMT

ಬಂಟ್ವಾಳ, ಜು.12: ಲಕ್ಷ್ಯ ವೃಕ್ಷ ಅಭಿಯಾನದಡಿ ಸಜಿಪನಡು ಗ್ರಾಮ ಪಂಚಾಯತ್ ವತಿಯಿಂದ ಇತ್ತೀಚೆಗೆ ಸಜಿಪನಡು ಗ್ರಾಮದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. 

ಗ್ರಾಪಂ ಅಧ್ಯಕ್ಷ ಸಜಿಪ ಮುಹಮ್ಮದ್ ನಾಸಿರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾಳೆ ಪ್ರಳಯ ಸಂಭವಿಸಲಿದೆ ಎಂದು ಗೊತ್ತಾದರೂ ಕೈಯಲ್ಲಿದ್ದ ಗಿಡವನ್ನು ನೆಡೆಯಿರಿ ಎಂದು ಪ್ರವಾದಿ ಮುಹಮ್ಮದ್ ಸ.ಅ.ರವರ ವಚನವಿದೆ. ಗಿಡಗಳನ್ನು ನೆಡುವುದೊಂದೇ ಗುರಿಯಾಗದೆ ನೆಟ್ಟ ಗಿಡಗಳನ್ನು ಪೋಷಿಸಿ ಮರವನ್ನಾಗಿ ಬೆಳೆಸುವುದು ಗುರಿಯಾಗಬೇಕು ಎಂದರು. 

ಈ ಸಂದರ್ಭದಲ್ಲಿ ಪುದು ಜಿಪಂ ಸದಸ್ಯ ರವೀಂದ್ರ ಕಂಬಳಿ, ಮಾಜಿ ಸದಸ್ಯ ಎಸ್.ಅಬ್ಬಾಸ್, ಗ್ರಾಪಂ ಸದಸ್ಯ ಮುಹಮ್ಮದ್ ಇಕ್ಬಾಲ್, ಎಸ್.ಎನ್.ಸುರೇಶ್ ಬಂಗೇರ, ಅಬ್ದುಲ್ ರಶೀದ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಜಿಪ ವಲಯಾಧ್ಯಕ್ಷ ನಿಯಾಝ್, ಕಾರ್ಯದರ್ಶಿ ಲತೀಫ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News