ರೈಲಿನಲ್ಲಿ ಮೊಬೈಲ್ ಕಳವು: ಆರೋಪಿ ಸೆರೆ

Update: 2016-07-12 18:09 GMT

ಮಣಿಪಾಲ, ಜು.12: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಮೊಬೈಲ್ ಫೋನ್ ಕಳವು ಮಾಡಿದ ಆರೋಪಿಯನ್ನು ರೈಲ್ವೆ ಪೊಲೀಸರು ಸೋಮವಾರ ಬೆಳಗ್ಗೆ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಪಿ.ಅಜಿತ್ ಎಂದು ಗುರುತಿಸಲಾಗಿದೆ. ಮಂಗಳೂರು- ಮಡಗಾಂವ್ ರೈಲು ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ನಿಂತು ನಿಧಾನವಾಗಿ ಚಲಿಸುವಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ತನ್ಯಚಂದ್ರಾ ಎಂಬವರ ಸುಮಾರು 40,000 ರೂ. ಮೌಲ್ಯದ ಐಫೋನ್‌ನ್ನು ಅಜಿತ್ ಎಳೆದುಕೊಂಡು ಪ್ಲಾಟ್‌ಫಾರ್ಮ್ ಕಡೆ ಪರಾರಿಯಾದನು. ತಕ್ಷಣ ಆಕೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು.
 ಅದರಂತೆ ಉಡುಪಿ ಕೊಂಕಣ್ ರೈಲ್ವೆ ಆರ್‌ಪಿಎಫ್ ನಿರೀಕ್ಷಕ ಶಿವರಾಮ ಜಿ.ರಾಠೋಡ್ ಹಾಗೂ ಸಿಬ್ಬಂದಿ ಅಜಿತ್‌ನನ್ನು ನಿಲ್ದಾಣದ ಬಳಿಯ ರಸ್ತೆಯಲ್ಲಿ ಬೆನ್ನಟ್ಟಿ ಹಿಡಿದು ಐಫೋನ್ ಸಮೇತ ವಶಕ್ಕೆ ತೆಗೆದುಕೊಂಡರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News