ಮಂಗಳೂರು ಮನಪಾ ಕಮಿಷನರ್ ಆಗಿ ಮುಹಮ್ಮದ್ ನಝೀರ್ ಅಧಿಕಾರ ಸ್ವೀಕಾರ
Update: 2016-07-13 12:31 GMT
ಮಂಗಳೂರು, ಜು.13: ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾಗಿ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್ ಗುರುವಾರ ಅಧಿಕಾರ ಸ್ವೀಕರಿಸಲಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಡಾ. ಎಚ್.ಎನ್. ಗೋಪಾಲಕೃಷ್ಣ ಅವರು ನಗರಾಭಿವೃದ್ದಿ ಸಚಿವಾಲಯಕ್ಕೆ ವರ್ಗಾವಣೆಗೊಂಡಿದ್ದಾರೆ.
ಮುಹಮ್ಮದ್ ನಜೀರ್ ಅವರು ಬಿಇ (ಸಿವಿಲ್) ಪದವೀಧರರಾಗಿದ್ದು ಕೆಪಿಎಸ್ಸಿ ಮೂಲಕ ಸಾಂಖ್ಯಿಕ ಇಲಾಖೆಗೆ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿದ್ದರು.
ದ.ಕ ಜಿಲ್ಲಾ ಪಂಚಾಯತ್ನಲ್ಲಿ ಯೋಜನಾಧಿಕಾರಿಯಾದ ಬಳಿಕ ಮುಡಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.