ಕೆಲಸಕ್ಕೆ ಬಾಲಕಾರ್ಮಿಕರ ಬಳಕೆ ರಾಜಸ್ಥಾನದ ನಿವಾಸಿಯ ಸೆರೆ

Update: 2016-07-14 18:25 GMT

ಮಂಜೇಶ್ವರ, ಜು.14: ಪಾನಿಪೂರಿ ತಯಾರಿ ಕೆಲಸಕ್ಕೆ 10ರಿಂದ 16 ವರ್ಷ ಪ್ರಾಯದ ಬಾಲಕರನ್ನು ಬಳಸಿಕೊಳ್ಳುತ್ತಿದ್ದ ಆರೋಪದಲ್ಲಿ ರಾಜಸ್ಥಾನ ಮೂಲದ ವ್ಯಕ್ತಿಯೋರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ರಾಜಸ್ಥಾನ ನಿವಾಸಿ ಪ್ರಸ್ತುತ ಪಚ್ಲಂಪ್ಪಾರೆಯಲ್ಲಿ ವಾಸವಾಗಿರುವ ಮಧುರಲಾಲ್(30) ಬಂಧಿತ ಆರೋಪಿ. ಸ್ಥಳೀಯರ ದೂರಿನಂತೆ ಈ ಕಾರ್ಯಾಚರಣೆ ನಡೆದಿದೆ. ಮಧುರಲಾಲ್‌ನ ಪಚ್ಲಂಪ್ಪಾರೆಯ ವಾಸಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದಾಗ ಅಪ್ರಾಪ್ತ ವಯಸ್ಸಿನ ಬಾಲಕರು ಪತ್ತೆಯಾಗಿದ್ದಾರೆ. ಪ್ರತ್ಯೇಕ ಶೆಡ್‌ಗಳನ್ನು ನಿರ್ಮಿಸಿ ಬಾಲ ಕಾರ್ಮಿಕರಿಂದ ಪಾನಿಪೂರಿ ಮಾಡಿಸಲಾಗುತಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಮಕ್ಕಳು ಆರೋಪಿಯ ಸಂಬಂಧಿಕರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News