ಮಂಜೇಶ್ವರ: ಅಡಿಕೆ ಕಳವು ಪ್ರಕರಣದ ಆರೋಪಿ ಸೆರೆ

Update: 2016-07-19 14:18 GMT

ಮಂಜೇಶ್ವರ, ಜು.19: ಅಂಗಡಿಯೊಂದರಿಂದ ಅಡಿಕೆ ಹಾಗೂ ಕರಿಮೆಣಸು ಕಳವುಗೈದ ಆರೋಪಿಯೊಬ್ಬನನ್ನು ಮಂಜೇಶ್ವರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಪೈವಳಿಕೆ ಸಮೀಪದ ಬಾಯಿಕಟ್ಟೆ ನಿವಾಸಿ ಜಯರಾಮ್ ನೋಂಡ (28) ಬಂಧಿತ ಆರೋಪಿ.

ಬಾಯಿಕಟ್ಟೆ ನಿವಾಸಿ ಮುಹಮ್ಮದ್ ರಫೀಕ್ ಎಂಬವರ ಅಂಗಡಿಯಿಂದ 760 ಕೆ.ಜಿ. ಅಡಿಕೆ ಹಾಗು ಕರಿಮೆಣಸು ಕಳವುಗೈಯಲಾಗಿತ್ತು. ಆರೋಪಿಯ ಪತ್ತೆಗೆ ಬಲೆ ಬೀಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳವುಗೈಯಲಾಗಿದ್ದ ಕರಿಮೆಣಸು ಹಾಗು ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಜಯರಾಮ್ ನೋಂಡ, ಬಾಳಿಗ ಅಝೀಝ್ ಎಂಬವರ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಇತ್ತೀಚೆಗೆ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News