ಮುಂಗಾರು ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

Update: 2016-07-23 18:35 GMT

ಮಂಗಳೂರು, ಜು. 23: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಎಸ್ ಕ್ಯೂಬ್ ಕರಾವಳಿಯ ಚಿತ್ರ ಕಲಾವಿದರ ವತಿಯಿಂದ ‘ಮುಂಗಾರು’ ಚಿತ್ರಕಲಾ ಪ್ರದರ್ಶನಕ್ಕೆ ನಗರದ ಮಣ್ಣಗುಡ್ಡೆಯ ಎಸ್ ಕ್ಯೂಬ್ ಆರ್ಟ್ ಗ್ಯಾಲರಿಯಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ. ಕೆ. ಬೈರಪ್ಪಚಾಲನೆ ನೀಡಿದರು. ಮಂಗಳೂರು ವಿವಿಯ ಎನ್. ಜಿ. ಪಾವಂಜೆ ಪೀಠ ಮತ್ತು ಆರ್ಟ್ ಕೆನರಾ ವತಿಯಿಂದ ಮುಂಗಾರು ಬಣ್ಣಗಳ ಸಿಂಚನ ಎಂಬ ಈ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕ್ಯಾನ್‌ವಾಸ್‌ನ ಮೇಲೆ, ಮರದ ಬೊಡ್ಡೆಯನ್ನು ಬಳಸಿಕೊಂಡು, ಇನ್‌ಸ್ಟಾಲೇಶನ್ ಮಾದರಿಯಲ್ಲಿ ಕರಾವಳಿಯ ಕಲಾವಿದರು ತಮ್ಮ ಕಲಾಚಾಕ್ಯತೆಯನ್ನು ಪ್ರದರ್ಶಿಸಿದ್ದರು. ಹಿರಿಯ ಚಿತ್ರಕಲಾವಿದ ದಿ. ಎನ್. ಜಿ. ಪಾವಂಜೆಯವರ ಪುತ್ರಿ ಅನಸೂಯ ಪಾವಂಜೆ ಉಪಸ್ಥಿತರಿದ್ದರು. ಕಲಾವಿದರಾದ ಹರೀಶ್ ಕೊಡಿಯಾಲ್‌ಬೈಲ್, ಜೀವನ್ ಸಾಲಿಯಾನ್, ಪೆರ್ಮುದೆ ಮೋಹನ್ ಕುಮಾರ್, ರಾಜೇಂದ್ರ ಕೇದಿಗೆ, ರಾಮಕೃಷ್ಣ ನಾಯಕ್, ರವಿ. ಎಂ. ಆರ್. ವಾಗ್ಳೆ, ಸಂತೋಷ್ ಅಂದ್ರಾದೆ, ರೇಶ್ಮಾ ಶೆಟ್ಟಿ, ಶರತ್ ಪಲಿಮಾರ್, ಸೈಯದ್ ಆಸಿಫ್ ಆಲಿ, ವೆಂಕಿ ಪಲಿಮಾರ್, ವಿಶ್ವಾಸ್ ಎಂ. ಭಟ್‌ರವರ ಕಲಾಕೃತಿಗಳು ಪ್ರದರ್ಶನಗೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News