ದರೋಡೆಗೆ ಸಂಚು: ಇಬ್ಬರ ಸೆರೆ; ನಾಲ್ವರು ಪರಾರಿ

Update: 2016-07-25 17:31 GMT

ಮಂಗಳೂರು, ಜು. 25: ಕುಳೂರು ಸಮೀಪ ವ್ಯಕ್ತಿಯೊಬ್ಬರ ದರೋಡೆಗೆ ಯತ್ನಿಸುತ್ತಿದ್ದ ತಂಡದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ, ಅವರಿಂದ ಮಾರಕಾಯುಧ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.

ಕಡಂದಲೆ ಕಾರ್ಕಳದ ಫೈಝಲ್ ಯಾನೆ ಟೊಪ್ಪಿ ಫೈಝಲ್ (33) ಮತ್ತು ಎಮ್ಮೆಕೆರೆ ಮಂಗಳೂರು ಅಬ್ದುಲ್ ನಾಸೀರ್ ಯಾನೆ ಡಾನ್ ನಾಸಿರ್ (33) ಬಂಧಿತ ಆರೋಪಿಗಳಾಗಿದ್ದು, ನಾಲ್ಕು ಮಂದಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಸೋಮವಾರ ಸಂಜೆ 4:30ರ ವೇಳೆಗೆ ಕೂಳೂರು ಪೆಟ್ರೋಲ್ ಬಂಕ್ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಬಂಧಿತರಿಂದ ಎರಡು ತಲವಾರು, ಕತ್ತಿ, ಮೆಣಸಿನ ಪುಡಿ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಕಾವೂರು ಠಾಣೆಗೆ ಹಸ್ತಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News