ನರೇಶ್ ಶೆಣೈ ತೀರ್ಪು ಕಾಯ್ದಿಸಿದ ನ್ಯಾಯಾಲಯ

Update: 2016-07-26 16:30 GMT

ಮಂಗಳೂರು, ಜು.26: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಿ.ಬಾಳಿಗಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ನಮೋ ಬ್ರಿಗೇಡ್‌ನ ಸ್ಥಾಪಕ ನರೇಶ್ ಶೆಣೈ ಜಾಮೀನಿಗೆ ಸಂಬಂಧಿಸಿ ಇಲ್ಲಿನ ಎರಡನೆ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಆಗಸ್ಟ್ 9ರಂದು ತೀರ್ಪು ಕಾಯ್ದಿರಿಸಿದೆ.

ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಸೋಮವಾರ ಹಾಗೂ ಮಂಗಳವಾರ ವಾದ-ಪ್ರತಿವಾದವನ್ನು ಆಲಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ.

ಆರೋಪಿಯ ಪರವಾಗಿ ನ್ಯಾಯವಾದಿ ವೈ.ವಿಕ್ರಮ್ ಹೆಗ್ಡೆ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News