ಜು.31 ರಂದು "ಗಮ್ಮತ್-2016' ಸಾಮೂಹಿಕ ವಿವಾಹ ಸಮಾರಂಭ

Update: 2016-07-27 10:56 GMT

ಮಂಗಳೂರು, ಜು.27: ಏರಿಯ ಮುಸ್ಲಿಂ ವೆಲ್ಫೇರ್ ಎಸೋಸೊಯೇಶನ್ ಸೌದಿ ಅರೇಬಿಯಾ ಹಾಗೂ ಜೋಕಟ್ಟೆ ಅಂಜುಮಾನ್ ಖುವ್ವತ್ತುಲ್ ಇಸ್ಲಾಂ ಸಂಘಟನೆ ಆಶ್ರಯದಲ್ಲಿ 'ಗಮ್ಮತ್-2016' ಸಾಮೂಹಿಕ ವಿವಾಹ ಸಮಾರಂಭ ಜು.31ರಂದು ಬೆಳಗ್ಗೆ 9.30ಕ್ಕೆ ಜೋಕಟ್ಟೆ ಅಂಜುಮಾನ್ ವಿದ್ಯಾ ಸಂಸ್ಥೆ ಮೈದಾನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌದಿ ಅರೇಬಿಯಾ ಜೆ.ಎ.ಎಂ.ಡಬ್ಲ್ಯೂ.ಎ ಅಧ್ಯಕ್ಷ ಹಾಜಿ ಬಿ.ಝಕರಿಯ್ಯಾ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಜೋಕಟ್ಟೆ ಮುಹಿಯುದ್ದೀನ್ ಹಳೆ ಜುಮಾ ಮಸೀದಿ ಖತೀಬರಾದ ಅಲಿ ಮದನಿ ಉದ್ಘಾಟಿಸಲಿದ್ದಾರೆ. ಜೋಕಟ್ಟೆ ಹೊಸ ಮುಹಿಯುದ್ದೀನ್ ಜುಮಾ ಮಸೀದಿ ಖತೀಬರಾದ ಇ.ಎಂ ಅಬ್ದುರ್ರಹ್ಮಾನ್ ದಾರಿಮಿ ಅಲ್ ಹಾಮಿದಿ ಮುಖ್ಯ ಭಾಷಣ ಮಾಡಲಿದ್ದಾರೆ. ನಿಕಾಹ್ ನೇತೃತ್ವವನ್ನು ದ.ಕ ಜಿಲ್ಲೆ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಹಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಜೋಕಟ್ಟೆ ಈದ್ಗಾ ಮಸೀದಿ ಖತೀಬರಾದ ಪಿ.ಎಂ ಅಬ್ದುಲ್ಲಾಹಿ ನಈಮಿ, ಮಾಜಿ ಉನ್ನತ ಶಿಕ್ಷಣ ಸಚಿವ ಹಾಜಿ ಬಿ.ಎ ಮೊದೀನ್, ಬೆಂಗಳೂರು ಟಿಕೇಸ್ ಫೌಂಡೇಶನ್ ಮಾಲಕ ಉಮರ್ ಟಿ.ಕೆ, ಸೌದಿ ಅರೇಬಿಯಾ ವೈಟ್ ಸ್ಟೋನ್ ಮಾಲಕ ಬಿ.ಎಂ ಶರೀಫ್, ಜೋಕಟ್ಟೆ ಹೊಸ ಜುಮಾ ಮಸೀದಿ ಅಧ್ಯಕ್ಷ ಹಾಜಿ ಜೆ.ಮುಹಮ್ಮದ್, ಜೋಕಟ್ಟೆ ಹಳೆ ಜುಮಾ ಮಸೀದಿ ಅಧ್ಯಕ್ಷ ಒ.ಎಂ ಅಬ್ದುಲ್ ಖಾದರ್, ನೇರಲಪದವು ಜುಮಾ ಮಸೀದಿ ಅಧ್ಯಕ್ಷ ಹಾಜಿ ಎ.ಎಚ್ ನೌಶಾದ್, ಹಾಜಿ ಎಂ.ಎ ರಹ್ಮಾನ್, ಹಾಜಿ ಬಿ.ಅಹ್ಮದ್ ಬಾವ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಜೆ.ಎ.ಎಂ.ಡಬ್ಲ್ಯೂ.ಎ ಅಧ್ಯಕ್ಷ ಹಾಜಿ ಬಿ.ಎ ರಶೀದ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News