ಮುಂಡಗೋಡ :ಸಾರಿಗೆ ಸಂಸ್ಥೆ ನೌಕರರ ಮುಷ್ಕರ - ಖಾಸಗಿ ವಾಹನಗಳದೇ ದರ್ಬಾರು

Update: 2016-07-27 16:45 GMT

ಮುಂಡಗೋಡ,ಜು.27 : ಕೆಎಸ್‌ಆರ್‌ಟಿಸಿ ಕರೆದಿದ್ದ ಅನಿರ್ಧಿಷ್ಟಾವಧಿ ಬಸ್ ಮುಷ್ಕರ ಕರೆಯ ಹಿನ್ನಲೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸಿದಂತಾಯಿತು. 

ಕೆಎಸ್‌ಆರ್‌ಟಿಸಿ ಬಸ್ ಗಳು ರಸ್ತೆಗೆ ಇಳಿಯದೇ ಇದ್ದ ಕಾರಣದಿಂದ ಖಾಸಗಿ ವಾಹನಗಳನ್ನೆ ಪ್ರಯಾಣಿಕರು ಅವಲಂಭಿಸಬೇಕಾಯಿತು.

ಖಾಸಗಿ ವಾಹನಗಳು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಪಿಎಸ್‌ಆಯ್ ಲಕ್ಕಪ್ಪ ನಾಯಾಕ ಕಾರ್ಯಾಚರಣೆ ಕೈಗೊಂಡು  ಫಕ್ಕಿರಪ್ಪ ಎನ್ನುವ ವಾಹನ ಚಾಲಕನ ಮೇಲೆ ಕ್ರಮ ಕೈಗೊಂಡು ದಂಡ ವಿಧಿಸಿದ್ದಾರೆ.

ಮುಂಡಗೋಡದಿಂದ ಹಾನಗಲ್, ಯಲ್ಲಾಪುರ ಬಂಕಾಪುರಗೆ ತೆರಳುವ ಪ್ರಯಾಣಿಕರು ಹೆಚ್ಚು ಕಡಿಮೆ ಸರಕಾರಿ ಬಸ್ ದರ ನೀಡಿದ್ದಾರೆ ಎನ್ನಲಾಗುತ್ತಿದ್ದು ಹುಬ್ಬಳ್ಳಿ, ಶಿರಸಿ ಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಹೆಚ್ಚಿನ ದರ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪೊಲೀಸರ ಕಾರ್ಯವೈಖರಿಯಿಂದ ಕೆಲವೊಂದು ವಾಹನ ಚಾಲಕರು ಎಚ್ಚೆತ್ತಕೊಂಡಿದ್ದರು ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News