ಸಿಎಂ ಪುತ್ರನ ಆರೋಗ್ಯಕ್ಕಾಗಿ ಉಳ್ಳಾಲ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ
Update: 2016-07-27 18:37 GMT
ಉಳ್ಳಾಲ, ಜು.27: ಅನಾರೋಗ್ಯದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರನ ಆರೋಗ್ಯಕ್ಕಾಗಿ ಉಳ್ಳಾಲ ದರ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಉಳ್ಳಾಲ್ ನೇತೃತ್ವದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಹಾಜಿ ಅಹ್ಮದ್ ಬಾವ ಮುಸ್ಲಿಯಾರ್ ದುಆ ನೆರವೇರಿಸಿದರು.
ಈ ಸಂದಭರ್ ಉಪಾಧ್ಯಕ್ಷ ಯು.ಕೆ. ಮೋನು ಕೋಟೆಪುರ, ಪ್ರಧಾನ ಕಾರ್ಯದರ್ಶಿ ತ್ವಾಹ ಮುಹಮ್ಮದ್, ಜೊತೆ ಕಾರ್ಯದರ್ಶಿ ನೌಷದ್ ಮೇಲಂಗಡಿ, ಸದಸ್ಯರಾದ ಆಸೀಫ್ಅಬ್ದುಲ್ಲ, ಹಮ್ಮಬ್ಬ ಕೋಟೆಪುರ, ಕೆ. ಮುಹಮ್ಮದ್, ಮಾಜಿ ಪುರಸಭಾ ಅಧ್ಯಕ್ಷರಾದ ಬಾಝಿಲ್ ಡಿಸೋಜಾ, ಯು.ಎ ಇಸ್ಮಾಯೀಲ್, ನಗರ ಸಭಾ ಸದಸ್ಯ ಮುಸ್ತಾಫ ಅಬ್ದುಲ್ಲ, ಮುಅಝೀನ್ ಮನ್ಸೂರ್ ಮುಸ್ಲಿಯಾರ್, ಕಾರ್ಯ ನಿರ್ವಹಣಾಕಾರಿ ಸೈಯದ್ ಶಿಹಾಬ್ ಉಪಸ್ಥಿತರಿದ್ದರು.