ಕಲ್ಲಾಪಿನಲ್ಲಿ ಆ.2ಕ್ಕೆ ಜಿಲ್ಲಾ ಮಟ್ಟದ ಹಜ್ ತರಬೇತಿ ಶಿಬಿರ
ಉಳ್ಳಾಲ, ಜು.28: ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್ ಮಂಜನಾಡಿ ವಲಯ ಇದರ ವತಿಯಿಂದ 2016-17ನೇ ಸಾಲಿನ ಜಿಲ್ಲಾ ಮಟ್ಟದ ಹಜ್ ತರಬೇತಿ ಶಿಬಿರವು ತೊಕ್ಕೊಟ್ಟುವಿನ ಕಲ್ಲಾಪು ಯುನಿಟಿ ಹಾಲ್ ನಲ್ಲಿ ಅ.2ರಂದು ನಡೆಯಲಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಮಂಜನಾಡಿ ವಲಯದ ಉಪಾಧ್ಯಕ್ಷ ಹೈದರ್ ಪರ್ತಿಪ್ಪಾಡಿ ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಹಜ್ ಯಾತ್ರಿಕರಿಗೆ ಒಂದು ದಿನ ನಡೆಯಲಿರುವ ಶಿಬಿರದಲ್ಲಿ ಶೈಖುನಾ ಪಿ.ಎಂ.ಮುಸ್ಲಿಯಾರ್ ಅವರು ತರಬೇತಿಯನ್ನು ನಡೆಸಿಕೊಡಲಿದ್ದಾರೆ.ಕಾರ್ಯಕ್ರಮವನ್ನು ಸಚಿವ ಯು.ಟಿ.ಖಾದರ್ ಅವರು ಉದ್ಘಾಟಿಸಲಿದ್ದು, ರಾಜ್ಯ ವಕ್ಫ್ ಸಮಿತಿ ಸದಸ್ಯ ವೈ ಮುಹಮ್ಮದ್ ಕುಂಞಿ, ದ.ಕ.ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಎಸ್.ಎಂ.ರಶೀದ್ ಹಾಜಿ, ಮಂಗಳೂರು ಝೀನತ್ ಭಕ್ಷ್ ಯತೀಂಖಾನ ಅಧ್ಯಕ್ಷ ಇಬ್ರಾಹಿಂ ಬಾವಾ ಹಾಜಿ, ಎಚ್.ಎಚ್.ಕಂಪೆನಿ ಪಾಲುದಾರರಾದ ಕುಂಞಿ ಅಹಮ್ಮದ್ ಹಾಜಿ, ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪ್ರದಾನ ಕಾರ್ಯದರ್ಶಿ ಜನಾಬ್ ಮಮ್ತಾಜ್ ಆಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಲಿಕುಂಞಿ ಪಾರೆ,ಟಿ.ಎಸ್.ಇಸ್ಮಾಯಿಲ್, ಕತ್ತರ್ಬಾವ ಹಾಜಿ, ಮುಹಮ್ಮದ್ ಮಾಸ್ಟರ್, ಎಂ.ಇ.ಮೊಯಿದೀನ್ ಕುಂಞಿ, ಜಲೀಲ್ ಮೋಂಟುಗೋಳಿ ಅವರು ಭಾಗವಹಿಸಿದ್ದರು.