ಗಾಂಜಾ ಪ್ರಕರಣದ ಆರೋಪಿ ಬಂಧನ

Update: 2016-07-29 18:20 GMT

ಮಂಜೇಶ್ವರ, ಜು.29: ಪೊಲೀಸ್ ಕಾರ್ಯಾಚರಣೆಯ ಸಂದರ್ಭ ಗಾಂಜಾ ಹಾಗೂ ಆಟೊರಿಕ್ಷಾ ಬಿಟ್ಟು ಪರಾರಿಯಾಗಿದ್ದ ಆರೋಪಿ ಮಳ್ಳಂಗೈ ನಿವಾಸಿ ಅಬ್ಬಾಸ್ ಯಾನೆ ಅಂಬಾಚು (42)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಜೂನ್ 4ರಂದು ಉಪ್ಪಳ ಬಳಿಯ ಪತ್ವಾಡಿಯಲ್ಲಿ ಅಬ್ಬಾಸ್ ಆಟೊರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀ ಸರು ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭ ಗಾಂಜಾ ಹಾಗೂ ಆಟೊರಿಕ್ಷಾ ಬಿಟ್ಟು ಪರಾರಿಯಾಗಿದ್ದ. ರಿಕ್ಷಾದಿಂದ 200 ಗ್ರಾಂ ಗಾಂಜಾ ವಶ ಪಡಿಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News