ಭಟ್ಕಳ: ಜಮೀಲ್‌ಆಹ್ಮದ್ ಷರೀಫ್‌ಗೆ ರಾಬಿತಾ ವರ್ಷದ ಉತ್ತಮ ಶಿಕ್ಷಕ ಪ್ರಶಸ್ತಿ

Update: 2016-08-01 12:56 GMT

 ಭಟ್ಕಳ,ಆ.1: ಇಲ್ಲಿನ ರಾಬಿತಾ ಸೂಸೈಟಿಯು 2016-17ನೇ ಸಾಲಿನ ಶೈಕ್ಷಣಿಕ ವರ್ಷದಿಂದ ರಾಬಿತಾ ವರ್ಷದಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪರಿಚಯಿಸಿದ್ದು ಪ್ರಥಮ ಪ್ರಶಸ್ತಿಯು ನವಾಯತ್ ಕಾಲೋನಿ ಅಂಜುಮನ್ ಪ್ರೌಢಶಾಲೆಯ ಶಿಕ್ಷಕ ಹಾಗೂ ಅಲ್‌ಇಂಡಿಯಾ ಐಡಿಯಲ್‌ ಟೀಚರ್ಸ್‌ ಅಸೋಸಿಯೇಶನ್ ಭಟ್ಕಳ ಶಾಖೆಯ ಪ್ರಧಾನ ಕಾರ್ಯದರ್ಶಿ ಜಮೀಲ್‌ ಆಹ್ಮದ್ ಷರೀಫ್ ಗೆ ಒಲಿದು ಬಂದಿದೆ.

ರವಿವಾರ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಜರಗಿದ ರಾಬಿತಾ ಅವಾರ್ಡ್ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಪ್ರದಾನ ಮಾಡಲಾಯಿತು.

 ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ರಾಬಿತಾ ಸಂಸ್ಥೆಯು ಇಂತಹ ಪ್ರಶಸ್ತಿಯನ್ನು ಹುಟ್ಟುಹಾಕಿದ್ದು ನಿಜಕ್ಕೂ ಶಿಕ್ಷಕ ಸಮುದಾಯಕ್ಕೆ ಸಂತಸದ ವಿಷಯವಾಗಿದೆ. ಈ ಪ್ರಶಸ್ತಿಯನ್ನು ನಾನು ಪ್ರಶಸ್ತಿ ಪಡೆಯಲುಕಾರಣೀಕರ್ತರಾದ ನನ್ನ ಪ್ರೀತಿಯ ವಿದ್ಯಾರ್ಥಿ ಮಿತ್ರರಿಗೆ ಹಾಗೂ ನನ್ನ ಜೊತೆಯಲ್ಲಿದ್ದು ಶೈಕ್ಷಣಿಕರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ನನ್ನೆಲ್ಲ ಶಿಕ್ಷಕ ಬಂಧುಗಳಿಗೆ ಅರ್ಪಿಸುತ್ತಿರುವುದಾಗಿ ತಿಳಿಸಿದರು.

 ಮರ್ಕಝಿಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಮುಲ್ಲಾ ಇಕ್ಬಾಲ್ ನದ್ವಿ, ಪ್ರಶಸ್ತಿಯನ್ನು ಪ್ರದಾನಿಸಿದರು.

ಈ ಸಂದರ್ಭದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಗಳ ಮಾಜಿ ಅಧ್ಯಕ್ಷ ಹಾಗೂ ಅನಿವಾಸಿ ಭಾರತೀಯ ಡಾ.ಸೈಯ್ಯದ್ ಖಲಿಲುರ್ರಹ್ಮಾನ್, ಭಟ್ಕಳ ವಿಧಾನಸಭಾಕ್ಷೇತ್ರದ ಶಾಸಕ ಮಾಂಕಾಳ್ ವೈದ್ಯ, ತಂಝೀಮ್‌ ಅಧ್ಯಕ್ಷ ಮುಝಮ್ಮಿಲ್‌ ಕಾಝಿಯಾ, ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್‌ ರಹೀಮ್‌ ಜುಕಾಕೋ, ಸಿಪಿಐ ಸುರೇಶ್ ನಾಯಕ,ಮೌಲಾನ ಮುಹಮ್ಮದ್‌ಇಲ್ಯಾಸ್‌ನದ್ವಿ, ರಾಬಿತಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಿದ್ದೀನ್‌ಕೊಚ್ಚಾಪ್ಪೊರುಕ್ನದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

ಐಟಾ ದಿಂದಅಭಿನಂದನೆ:  ನವಾಯತ್ ಕಾಲೋನಿ ಅಂಜುಮನ್ ಪ್ರೌಢಶಾಲೆ ಶಿಕ್ಷಕ ಭಟ್ಕಳ ತಾಲೂಕು ಐಟಾ ಪ್ರಧಾನ ಕಾರ್ಯದರ್ಶಿಯಾಗಿರುವ ಜಮೀಲ್‌ ಆಹ್ಮದ್ ಷರೀಪ್‌ರಿಗೆ ಈ ವರ್ಷದ ರಾಬಿತಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಕ್ಕಾಗಿ ಆಲ್‌ಇಂಡಿಯಾ ಐಡಿಯಲ್‌ ಟೀಚರ್ಸ್‌ ಅಸೋಸಿಯೇಶನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಆರ್.ಮಾನ್ವಿ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಮುಹಮ್ಮದ್ ಯಾಸೀನ್, ಭಟ್ಕಳ ತಾಲೂಕು ಅಧ್ಯಕ್ಷ ಇಮ್ರಾನ್ ಮುಲ್ಲಾ, ನ್ಯೂ ಶಮ್ಸ್ ಸ್ಕೂಲ್ ಆಡಳಿತ ಮಂಡಳಿ ಉಪಾಧ್ಯಕ್ಷ ಸೈಯ್ಯದ್‌ಅಶ್ರಫ್ ಬರ್ಮಾವರ್, ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಅಂಜುಮನ್ ಶಿಕ್ಷಣ ಸಂಸ್ಥೆಯಗಳ ಅಧ್ಯಕ್ಷಜುಕಾಕೋಅಬ್ದುಲ್‌ರಹೀಮ್ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳ ಮುಖಂಡರುಅಭಿನಂದನೆ ಸಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News