ಹದಗೆಟ್ಟ ರಸ್ತೆ: ಎಸಿ ಪರಿಶೀಲನೆ

Update: 2016-08-03 18:20 GMT


ಬೆಳ್ತಂಗಡಿ, ಆ.3: ಕಳಿಯ ಗ್ರಾಮದ ಹೀರ್ಯದಿಂದ ಬಾಕಿಮಾರು, ಬೆರ್ಕೆತೋಡಿ, ಕಲ್ಕುರ್ಣಿ, ಸುದೆಬರಿ ವರೆಗೆ ಹೋಗುವ ಮಣ್ಣಿನ ರಸ್ತೆ ಹದಗೆಟ್ಟಿದ್ದು ಮಂಗಳವಾರ ಪುತ್ತೂರು ಎಸಿ ಡಾ.ರಾಜೇಂದ್ರ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಎಚ್‌ಪಿಸಿಎಲ್ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಸಂದರ್ಭ ರಸ್ತೆ ಹಾಳಾಗಿದ್ದು ಹಾಗೂ ಚರಂಡಿ ಇಲ್ಲದೆ ರಸ್ತೆ ಹದೆಗೆಟ್ಟಿದ್ದು ಸಾರ್ವಜನಿಕರು ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಸ್ಥಳಕ್ಕಾಗಮಿಸಿದ ಎಸಿ ಈ ಬಗ್ಗೆ ವರದಿ ನೀಡುವಂತೆ ಗ್ರಾಪಂಗೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News