ಕೋಳಿ ಅಂಕಕ್ಕೆ ದಾಳಿ: ಎಂಟು ಮಂದಿಯ ಸೆರೆ
Update: 2016-08-03 18:23 GMT
ಉಪ್ಪಿನಂಗಡಿ, ಆ.3: ಕೋಳಿ ಅಂಕಕ್ಕೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ ಘಟನೆ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ಬುಧವಾರ ನಡೆದಿದೆ. ಕೊಕ್ಕಡ ಗ್ರಾಮದ ಗಾಣದಕೊಟ್ಟಿಗೆ ಮನೆ ನಿವಾಸಿ ಸುರೇಶ , ಕೌಕ್ರಾಡಿ ಗ್ರಾಮದ ಪೆಳತ್ತಿಂಜದ ದಯಾನಂದ, ಗೋಳಿತ್ತೊಟ್ಟು ಶಾಂತಿನಗರ ನಿವಾಸಿ ಕುಶಾಲಪ್ಪ ಗೌಡ , ನೆಲ್ಯಾಡಿ ಗ್ರಾಮದ ಬರಮೇಲು ನಿವಾಸಿ ಸುಂದರ , ಕೊಪ್ಪ ಮಾದೇರಿಯ ಪೂಜಾರ ಮನೆಯ ನಾಗಪ್ಪ ಕುಂಬಾರ, ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ನಿವಾಸಿಗಳಾದ ಶಿವಪ್ರಸಾದ್, ಗಿರೀಶ್, ಪಟ್ಟೂರಿನ ಅಡೈಮನೆ ನಿವಾಸಿ ಕಿಂಞಪ್ಪಗೌಡ ಎಂಬವರನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ಕೋಳಿ ಹಾಗೂ 600 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಉಪ್ಪಿನಂಗಡಿ ಠಾಣಾಧಿಕಾರಿ ತಿಮ್ಮಪ್ಪ ನಾಯ್ಕರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ದೇವದಾಸ್, ಸಚಿನ್ ಹಾಗೂ ನಂಜುಂಡಯ್ಯ ಪಾಲ್ಗೊಂಡಿದ್ದರು.