ಕಾಸರಗೋಡು: ಡಿವೈಎಫ್ಐ, ಮುಸ್ಲಿಂ ಯೂತ್ಲೀಗ್ನಿಂದ ಸರಕಾರಿ ಆಸ್ಪತ್ರೆಗೆ ಮುತ್ತಿಗೆ
Update: 2016-08-04 10:30 GMT
ಕಾಸರಗೋಡು, ಆ.4: ದಲಿತ ಮಹಿಳೆಯೋರ್ವರ ಶಸ್ತ್ರಚಿಕಿತ್ಸೆಗಾಗಿ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಲಂಚ ಕೇಳಿದ್ದಾರೆ ಎಂದು ಆರೋಪಿಸಿ ಡಿವೈಎಫ್ಐ ಮತ್ತು ಮುಸ್ಲಿಂ ಯೂತ್ಲೀಗ್ ಕಾರ್ಯಕರ್ತರು ಕಾಸರಗೋಡು ಜನರಲ್ ಆಸ್ಪತ್ರೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಧರಣಿಯನ್ನು ಜಿಲ್ಲಾ ಕಾರ್ಯದರ್ಶಿ ಕೆ.ಮಣಿಕಂಠನ್ ಉದ್ಘಾಟಿಸಿದರು. ಪಿ .ಶಿವಪ್ರಸಾದ್, ಸಿ.ಎಂ.ಬಷೀರ್, ಮೊಯ್ದಿನ್ ಕೊಲ್ಲಂಬಾಡಿ, ಎಂಎಸ್ ಎಫ್ ರಾಜ್ಯ ಉಪಾಧ್ಯಕ್ಷ ಹಾಶಿಂ ಬಂಬ್ರಾಣ, ಆರಿಫ್ , ಅಶ್ರಫ್, ಸಿದ್ದಿಕ್ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.