ಅಕ್ರಮ ಜಾನುವಾರು ಸಾಗಾಟ: 21 ಜಾನುವಾರು ವಶ

Update: 2016-08-04 18:14 GMT

 ಉಡುಪಿ, ಆ.4: ಇಲ್ಲಿನ ನಗರ ಪೊಲೀಸರು ಅಂಬಲಪಾಡಿ ಜಂಕ್ಷನ್ ಬಳಿ ಬೊಲೆರೋ ಪಿಕ್‌ಅಪ್‌ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ.
 ಬಂಧಿತ ಆರೋಪಿಗಳನ್ನು ಮಂಗಳೂರು ಕುಲಾಯಿಯ ಸಾದಿಕ್(31) ಹಾಗೂ ಕೂಳೂರು ಪಂಜಿಮೊಗರಿನ ಇಕ್ಬಾಲ್(28) ಎಂದು ಗುರುತಿಸಲಾಗಿದೆ. ಆಸೀಫ್ ಹಾಗೂ ಶಮೀರ್ ಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ ಪಿಕ್‌ಅಪ್ ವಾಹನ, 21 ಜಾನುವಾರು, ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾರಕೂರು ಕಡೆಯಿಂದ ಮಂಗಳೂರು ಕಡೆಗೆ ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ದೊರೆತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News