ಸನ್ಮಾರ್ಗ ಕುರ್‌ಆನ್ ಸ್ಪರ್ಧೆನಾಳೆ ಬಹುಮಾನ ವಿತರಣೆ

Update: 2016-08-04 18:29 GMT

ಮಂಗಳೂರು, ಆ.4: ಸನ್ಮಾರ್ಗ ವಾರಪತ್ರಿಕೆಯು ಓದುಗರಿಗಾಗಿ ಏರ್ಪಡಿಸಿದ್ದ ಸನ್ಮಾರ್ಗ ಕುರ್‌ಆನ್ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭವು ಆ.6ರಂದು ಅಪರಾಹ್ನ 3ಕ್ಕೆ ನಗರದ ಬಂದರ್‌ನಲ್ಲಿರುವ ಹಿದಾಯತ್ ಸೆಂಟರ್‌ನಲ್ಲಿ ಜರಗಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್‌ನ ಚೆರ್‌ಮ್ಯಾನ್ ಕೆ.ಎಂ. ಶರೀಫ್, ಟ್ರಸ್ಟಿಗಳಾದ ಸಈದ್ ಇಸ್ಮಾಯೀಲ್, ಅಬ್ದುಲ್ ಅಝೀಝ್. ಡಿ.ಎಂ., ಸನ್ಮಾರ್ಗ ಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ, ಅನುಪಮ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ. ಭಾಗವಹಿಸಲಿದ್ದಾರೆ. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಸಮಾರೋಪ ನುಡಿಗಳನ್ನಾಡುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News