ಕಾಸರಗೋಡು: ಕೆಲಸಕ್ಕೆ ತೆರಳಿದ್ದ ಯುವಕ ನಾಪತ್ತೆ
Update: 2016-08-06 09:18 GMT
ಕಾಸರಗೋಡು, ಆ.6: ಹೋಟೆಲ್ ಕೆಲಸಕ್ಕೆಂದು ಎರ್ನಾಕುಲಂಗೆ ತೆರಳಿದ್ದ ಯುವಕನೋರ್ವ ನಾಪತ್ತೆಯಾಗಿರುವುದಾಗಿ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ.
ಅಡೂರು ಚಿನ್ನಪ್ಪಾಡಿಯ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ಹಾರಿಸ್ (20) ನಾಪತ್ತೆಯಾದ ಯುವಕ. ಆರು ತಿಂಗಳಿಂದ ಈತನ ಯಾವುದೇ ಮಾಹಿತಿ ಇಲ್ಲ ಎಂದು ಪೊಲೀಸರಿಗೆ ಮನೆಯವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಒಂದು ವರ್ಷದ ಹಿಂದೆ ಈತ ಹೋಟೆಲ್ ಕೆಲಸಕ್ಕೆಂದು ತೆರಳಿದ್ದು, ಆರು ತಿಂಗಳ ಕಾಲ ಮನೆಯವರ ಜೊತೆ ಸಂಪರ್ಕದಲ್ಲಿದ್ದನು. ಇದೀಗ ಯಾವುದೇ ಮಾಹಿತಿ ಇಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.