ನಂತೂರ್ : ವಿಶ್ವಾಸ್ ಬಾವ ಬಿಲ್ಡರ್ಸ್‌ನ ನೂತನ ವಸತಿ ಸಮುಚ್ಚಯ ‘ವಿಶ್ವಾಸ್ ಕಾರ್ಲ್ ಬೆಂಝ್’ಗೆ ಶಿಲಾನ್ಯಾಸ

Update: 2016-08-07 07:23 GMT

ಮಂಗಳೂರು, ಆ.7: ವಿಶ್ವಾಸ್ ಬಾವ ಬಿಲ್ಡರ್ಸ್‌ ವತಿಯಿಂದ ನಂತೂರಿನಲ್ಲಿ ನಿರ್ಮಾಣವಾಗಲಿರುವ 12 ಅಂತಸ್ತುಗಳ 48 ಫ್ಲ್ಲಾಟ್‌ಗಳಿರುವ ನೂತನ ವಸತಿ ಸಮುಚ್ಚಯ ‘ವಿಶ್ವಾಸ್ ಕಾರ್ಲ್ ಬೆಂಝ್’ಗೆ ಇಂದು ಶಿಲಾನ್ಯಾಸ ನೆರವೇರಿತು.
 ಕಾರ್ಯಕ್ರಮದಲ್ಲಿ ವಿಶ್ವಾಸ್ ಕಾರ್ಲ್ ಬೆಂಝ್‌ನ ಬ್ರೋಷರ್ ಬಿಡುಗಡೆಗೊಳಿಸಿ ಮಾತನಾಡಿದ ಯೆನೆಪೋಯ ವಿವಿ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ, ಅತ್ಯುತ್ತಮ ಸುಂದರ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಈ ನೂತನ ವಸತಿ ಸಮುಚ್ಚಯ ಸಕಲ ಸೌಕರ್ಯಗಳನ್ನು ಹೊಂದಿದೆ. ಈ ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ, ಒಳ್ಳೆಯ ಗುಣಮಟ್ಟವಿದ್ದರೆ ಮಾರುಕಟ್ಟೆಯಲ್ಲಿ ಉದ್ಯಮ ಉಳಿಯಲು ಸಾಧ್ಯ. ಅಂತಹ ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ವಿಶ್ವಾಸ್ ಬಾವ ಬಿಲ್ಡರ್ಸ್‌ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಮಾತನಾಡಿ, ಜನರ ಕೈಗೆಟುಕುವ ದರದಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡುತ್ತಿರುವ ವಿಶ್ವಾಸ್ ಬಾವ ಬಿಲ್ಡರ್ಸ್‌ನವರಿಗೆ ಶುಭವಾಗಲಿ ಎಂದು ಹಾರೈಸಿದರು.
ಮಂಗಳೂರು ಸೀನಿಯರ್ ಪ್ರೀಸ್ಟ್ ಹೋಮ್‌ನ ಫಾ.ಓಸ್ವಾರ್ಡ್ ಲಸ್ರಾದೊ ಮಾತನಾಡಿ, ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಮನೆಯನ್ನು ಒದಗಿಸಿಕೊಡುತ್ತಿರುವ ವಿಶ್ವಾಸ್ ಬಾವ ಬಿಲ್ಡರ್ಸ್‌ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
  ಕಾರ್ಯಕ್ರಮದಲ್ಲಿ ಮನಪಾ ಸದಸ್ಯ ಡಿ.ಕೆ.ಅಶೋಕ್ ಕುಮಾರ್, ರಜೀನಾ ಖಾದರ್, ಅಬ್ದುಲ್ ಖಾದರ್ ಕುಕ್ಕಾಡಿ, ತಹವರ್ ಬಶೀರ್, ಇನ್‌ಲ್ಯಾಂಡ್ ಬಿಲ್ಡರ್ಸ್‌ ಚೇರ್‌ಮೆನ್ ಸಿರಾಜ್ ಅಹ್ಮದ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ರಶೀದ್ ಹಾಜಿ ಉಪಸ್ಥಿತರಿದ್ದರು.
 ವಿಶ್ವಾಸ್ ಬಾವ ಬಿಲ್ಡರ್ಸ್‌ ಮ್ಯಾನೇಜಿಂಗ್ ಪಾರ್ಟ್‌ನರ್ ಅಶ್ರಫ್ ಜಿ. ಬಾವ ಸ್ವಾಗತಿಸಿದರು. ವಿಶ್ವಾಸ್ ಬಾವ ಬಿಲ್ಡರ್ಸ್‌ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುರ್ರವೂಫ್ ಪುತ್ತಿಗೆ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News